ಹನೂರು: ಕಹಿ ಇರುವ ಬೇವಿನ ಮರದಿಂದ ಹಾಲು ಸೋರುತ್ತಿದ್ದು , ಜನ ಮರುಳೋ , ಜಾತ್ರೆ ಮರುಳೋ ಎಂಬಂತೆ ಸುತ್ತಮುತ್ತಲ ಸಾವಿರಾರು ಜನ ಈ ವಿಸ್ಮಯ ವೀಕ್ಷಿಸಲು ಮುಗಿ ಬೀಳುತ್ತಿದ್ದಾರೆ. ತಾಲ್ಲೂಕಿನ ರಾಮಾಪುರದಿಂದ ದಿನ್ನಳ್ಳಿ ಗ್ರಾಮಕ್ಕೆ ಹೋಗುವ ಮಾರ್ಗದ ಮಧ್ಯದಲ್ಲಿರುವ ಜಮೀನಿನಲ್ಲಿರುವ ಬೇವಿನ ಮರದಿಂದ ಹಾಲಿನ ರೂಪದ ದ್ರವ ಹೊರ ಬೀಳುತ್ತಿದೆ.
ಕಹಿ ಬೇವಿನ ಮರದಿಂದ ಹಾಲು ಹೊರ ಬೀಳುತ್ತಿರುವುದನ್ನು ನೋಡಲು ಮುಗಿ ಬೀಳುತ್ತಿರುವ ಜನ ಬೇವಿನ ಮರಕ್ಕೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ದೇವರ ಮೇಲೆ ಭಕ್ತಿ ಇರುವವರು ಪೂಜೆ ಪುನಸ್ಕಾರ ಮಾಡುತ್ತಿದ್ದರೆ, ಇಂದಿನ ಯುವ ಪೀಳಿಗೆ ಮರದ ಚಿತ್ರ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಹವಾಮಾನ ವೈಪರೀತ್ಯ ಇಲ್ಲವೆ ಪ್ರಕೃತಿ ವಿಕೋಪದಿಂದ ಬೇವಿನ ಮರದಿಂದ ಹಾಲಿನ ರೂಪದ ದ್ರವ ಹೊರ ಬರುತ್ತಿದೆ ಎನ್ನಲಾಗಿದೆ.
Comments are closed.