ಬೆಂಗಳೂರು: ಸಚಿವ ಸ್ಥಾನ ಕೊಟ್ಟ ಮೇಲೂ ಅತೃಪ್ತರ ಬಣ ಸೇರಿದ್ದ ಆರ್.ಶಂಕರ್ ನಡೆ ಎಲ್ಲರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಅತ್ತ ಅತೃಪ್ತರ ಬಣದಿಂದ ಎಸ್ಕೇಪ್ ಆದ ಶಂಕರ್ ಇತ್ತ ಮೈತ್ರಿಗೂ ಸಿಕ್ತಿಲ್ಲ. ಬಿಜೆಪಿಗೂ ಕಾಣ್ತಿಲ್ಲ.
ರಾಣಿಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕರಾದ ಶಂಕರ್, ಮುಂಬೈನ ರೆಬೆಲ್ ಶಾಸಕರ ತಂಡದಲ್ಲಿದ್ದರು. ಶಂಕರ್ರನ್ನ ರಮಡ ರೆಸಾರ್ಟ್ಗೆ ಶಿಫ್ಟ್ ಮಾಡಬೇಕಾಗಿದ್ದು, ನಿನ್ನೆ ಮುಂಬೈನಿಂದ್ ಹೈದರಾಬಾದ್ಗೆ ಹೊರಟಿದ್ದು, ಅಲ್ಲಿಂದ ಬೆಂಗಳೂರಿಗೆ ಬರಬೇಕಿತ್ತು. ಆದ್ರೆ ಶಂಕರ್ ಯಾರ ಸಂಪರ್ಕಕ್ಕೂ ಸಿಗದೇ ಎಸ್ಕೇಪ್ ಆಗಿದ್ದಾರೆ.
ಈ ಕಾರಣಕ್ಕೆ ಬಿಜೆಪಿ ಮತ್ತು ಮೈತ್ರಿ ಸರ್ಕಾರ ಇಬ್ಬರಿಗೂ ಶಂಕರ್ ನಡೆಯಿಂದ ಅಸಮಾಧಾನ ಉಂಟಾಗಿದೆ. ಆದ್ರೆ ಶಂಕರ್ ಹೈದರಾಬಾದ್ನಿಂದ ಬೆಂಗಳೂರಿಗೆ ಬರ್ತಿರೋದು ಬಹುತೇಕ ಕನ್ಫರ್ಮ್ ಆಗಿದೆ. ಆದ್ರೆ ಕೆಐಎಎಲ್ಗೆ ತಡರಾತ್ರಿ ಬರಬೇಕಿದ್ದ ವಿಮಾನದಲ್ಲೂ ಶಂಕರ್ ಇರಲಿಲ್ಲ. ಹೀಗಾಗಿ ರಸ್ತೆ ಮಾರ್ಗವಾಗಿ ಶಂಕರ್ ಬೆಂಗಳೂರಿಗೆ ಬರುತ್ತಿದ್ದಾರೆಂದು ಹೇಳಲಾಗಿದೆ.
ಇಂದು ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿದ್ದು, ಬಿಜೆಪಿಯವರಿಗೆ ಶಂಕರ್ ಮತ್ತೆ ಯೂಟರ್ನ್ ಹೊಡೆದ್ರಾ ಎಂಬ ಅನುಮಾನ ಶುರುವಾಗಿದೆ.
Comments are closed.