ಕರಾವಳಿ

ಮೋದಿ ಗೆದ್ದಿದ್ದಕ್ಕೆ ದೇವರಿಗೆ ಉರುಳು ಸೇವೆ ಮಾಡಿ ಹರಕೆ ಸಲ್ಲಿಸಿದ ಕೋಟದ ‘ನಮೋ’ ಅಭಿಮಾನಿ! (Video)

Pinterest LinkedIn Tumblr

ಕುಂದಾಪುರ: ದೇಶದಲ್ಲಿ ಮತ್ತೆ ಎನ್.ಡಿ.ಎ.ಗೆ ಗೆಲವು ಸಿಕ್ಕಿ ಮೋದಿ ಎರಡನೇ ಬಾರಿ ಪ್ರಧಾನಿಯಾಗುತ್ತಿದ್ದು ಮೋದಿಯವರ ಈ ಯಶಸ್ಸಿನ ಬಗ್ಗೆ ದೇವರಲ್ಲಿ ಈ ಹಿಂದೆಯೇ ಹರಕೆ ಹೊತ್ತ ಮೋದಿ ಅಭಿಮಾನಿಯೋರ್ವ ದೇವರಿಗೆ ಉರುಳು ಸೇವೆ ಮಾಡಿ ಹರಕೆ ಸಮರ್ಪಿಸಿದ್ದಾರೆ.

ಯಾವುದೇ ವಿಘ್ನವಿಲ್ಲದೇ ಕೇಂದ್ರದಲ್ಲಿ ಮೋದಿಯವರ ಸರ್ಕಾರ ಮತ್ತೆ ಬಂದರೆ ತಾನು ಉರುಳು ಸೇವೆ ಮಾಡುವುದಾಗಿ ಚುನಾವಣಾ ಪೂರ್ವದಲ್ಲಿ ಹರಕೆ ಹೊತ್ತಿದ್ದವರು ಉಡುಪಿ ಜಿಲ್ಲೆಯ ಕೋಟದ ನಿವಾಸಿ ಲಕ್ಷ್ಮಣ ಕುಂದರ್. ಕೋಟದಲ್ಲಿರುವ ವರುಣತೀರ್ಥ ಶ್ರೀ ರಾಜಶೇಖರ ದೇವಸ್ಥಾನಕ್ಕೆ ಹೊತ್ತಿದ್ದ ಉರುಳು ಸೇವೆ ಹರಕೆಯನ್ನು ಶುಕ್ರವಾರ (ಇಂದು) ಮುಂಜಾನೆ ಶ್ರೀ ದೇವಳಕ್ಕೆ ಆಗಮಿಸಿ ಉರುಳು ಸೇವೆ ನಡೆಸುವ ಮೂಲಕ ಮೋದಿಯವರಿಗೆ ಇನ್ನೂ ಕೂಡ ಯಶಸ್ಸು ಒಲಿದು ಬರಲಿ ಎಂದು ಪ್ರಾರ್ಥಿಸಿದ್ದಾರೆ.

 

ಹರ ಹರ ಮೋದಿ…
ಉರುಳು ಸೇವೆ ಮಾಡುತ್ತಾ ‘ಹರ ಹರ ಮೋದಿ’, ‘ರಾಜಶೇಖರ’ ಎನ್ನುತ್ತಾ ಒಂದೆಡೆ ತನ್ನ ನೆಚ್ಚಿನ ಮೋದಿಯನ್ನು ಹಾಗೂ ಆರಾಧ್ಯ ದೇವ ರಾಜಶೇಖರ ಸ್ವಾಮಿಯನ್ನು ನೆನೆದು ಲಕ್ಷ್ಮಣ್ ಭಾವುಕರಾದರು. ಸದಾ ಕಾಲ ದೇಶದಲ್ಲಿ ಮೋದಿ ಸಮರ್ಥ ನಾಯಕನಾಗಿ ಆರಿಸಿ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಯಾರು ಈ ಲಕ್ಷ್ಮಣ?
ಕೋಟ ಪೊಲೀಸ್ ಠಾಣೆ ಬಳಿ ಲಕ್ಷಣ ಅವರದ್ದು ಶ್ರೀ ಸನ್ನಿಧಿ ಹೆಸರಿನ ಕ್ಯಾಂಟಿನ್ ಇದೆ. ಲಕ್ಷ್ಮಣ ಕುಂದರ್ ಪಕ್ಕಾ ಮೋದಿ ಪಾಲೋವರ್ ಹಾಗೂ ಫ್ಯಾನ್. ಮೋದಿ ಬಗ್ಗೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿಯೇ ಪ್ರತಿ ವರ್ಷ ಮೋದಿ ಹುಟ್ಟುಹಬ್ಬವನ್ನು ಇವರು ತನ್ನ ವರ್ಷದ ಪರಿಶ್ರಮದ ಹಣದಲ್ಲಿ ಆಚರಿಸ್ತಾರೆ. ಅಂದು ತನ್ನ ಕ್ಯಾಂಟಿನ್’ನಲ್ಲಿ ಕೇಕ್ ಕತ್ತರಿಸಿ ಅಂದು ಬರುವ ನೂರಾರು ಜನರಿಗೆ ಟಿಫನ್ ಹಾಗೂ ಟೀ ಉಚಿತವಾಗಿ ನೀಡ್ತಾರೆ. ಇದಕ್ಕಾಗಿ ಇವರು ನಿತ್ಯ 50 ರೂಪಾಯಿ ಹಣವನ್ನು ತನ್ನ ಕ್ಯಾಂಟಿನ್ ದುಡಿಮೆಯಲ್ಲಿ ಕೂಡಿಡುತ್ತಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.