ಕರ್ನಾಟಕ

ಪೊಲೀಸರಿಂದ ಕಿರುಕುಳ: ಧಾರವಾಡದ ಹೆದ್ದಾರಿಯಲ್ಲಿ ಮಗು, ಪತ್ನಿ ಜೊತೆ ಪ್ರತಿಭಟನೆಗೆ ಕೂತ ಕಾರು ಚಾಲಕ! (Video)

Pinterest LinkedIn Tumblr

ಧಾರವಾಡ: ಪೊಲೀಸರ ವಿರುದ್ಧ ಅಸಮಾಧಾನಗೊಂಡ ಕಾರು ಚಾಲಕ ತನ್ನ ಪತ್ನಿ ಹಾಗೂ ಪುಟ್ಟ ಮಗುವಿನ ಸಮೇತ ನಡು ರಸ್ತೆಯಲ್ಲಿಯೇ ಕುಳಿತು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಧಾರವಾಡ ಹೊರವಲಯದ ಕೆಲಗೇರಿ ಬ್ರಿಡ್ಜ್ ಬಳಿ ನಡೆದಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ವಾಹನ ದಾಖಲಾತಿ ತಪಾಸಣೆ ಹೆಸರಿನಲ್ಲಿ ಪೊಲೀಸರು ಕಿರಿಕಿರಿ ಉಂಟು ಮಾಡಿದ್ದಾರೆ ಎಂದು ಚಾಲಕ ಆರೋಪಿಸಿ ತನ್ನ ಪುಟ್ಟ ಮಗು, ಪತ್ನಿ ಸಮೇತ ನಡುರಸ್ತೆಯಲ್ಲೇ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕಾರು ಮಾಲೀಕ ಪ್ರತಿಭಟನೆ ಮಾಡಿದ್ದಾರೆ. ದಾಗ ಕೊನೆಗೆ ಪೊಲೀಸರು ಕೈ ಮುಗಿದು ಕ್ಷಮೆ ಕೇಳಿದ್ದಾರೆ.

ಈ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರು ಹಣ ಕೇಳಿದ್ದರಿಂದ ಹೀಗಾಗಿದೆ ಎಂದು ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಪೋಸ್ಟ್ ರವಾನೆ ಆಗುತ್ತಿದೆ.

Comments are closed.