ಕರಾವಳಿ

ಬೈಂದೂರಿನಲ್ಲಿ ಬಿಜೆಪಿಗರಿಂದ ಸಿಎಂಗೆ ಕಪ್ಪು ಪಟ್ಟಿ ಪ್ರದರ್ಶನ ತಡೆದ ಪೊಲೀಸರು! (Video)

Pinterest LinkedIn Tumblr

ಕುಂದಾಪುರ: ಬೈಂದೂರಿನಲ್ಲಿ ನಡೆಯುವ ಸಾಧನ ಸಮಾವೇಶ ಹಾಗೂ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸುವ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟಕ್ಕೆ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರಿಂದ ತಡೆ ಬಿದ್ದಿದೆ.

ಬಿಜೆಪಿಗರು ಕಪ್ಪು ಪಟ್ಟಿ ಪ್ರದರ್ಶನ ಮಾಡುವ ಕುರಿತು ಭಾನುವಾರವೇ ಪೊಲೀಸರಿಗೆ ಮುನ್ಸೂಚನೆಯಿದ್ದು ಹೈ ಅಲರ್ಟ್ ಆಗಿದ್ದರು. ಅಂತೆಯೇ ಸೋಮವಾರ ಮಧ್ಯಾಹ್ನದ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಅರೆಶಿರೂರಿಗೆ ಬಂದು ಬಳಿಕ ರಸ್ತೆ ಮಾರ್ಗವಾಗಿ ಬೈಂದೂರಿಗೆ ತೆರಳುತ್ತಿದ್ದ ಸಿಎಂ ಕಾರು ತಡೆದು ಯಡ್ತರೆ ಸಮೀಪ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಸಿಎಂ ಆಗಮನಕ್ಕೂ ಮೊದಲೇ ಪೊಲೀಸರು ವಶಕ್ಕೆ ಪಡೆದರು. ಬಂಧಿಸಲು ಮುಂದಾದ ಪೊಲೀಸರ ಮುಂದೆಯೇ ಕಪ್ಪು ಬಾವುಟ ಪ್ರದರ್ಶಿಸಿ ಸಿಎಂ ವಿರುದ್ಧ ಘೋಷಣೆಯನ್ನು ಬಿಜೆಪಿ ಕಾರ್ಯಕರ್ತರು ಕೂಗಿದರು.

Comments are closed.