ಕರಾವಳಿ

ಅರಾಟೆ | ಸಿಡಿಲು ಬಡಿದು ಕಾರ್ಮಿಕ ಸಾವು

Pinterest LinkedIn Tumblr

ಕುಂದಾಪುರ:  ಗುರುವಾರ ಸಂಜೆ ಕುಂದಾಪುರ, ಬೈಂದೂರಿನಾದ್ಯಂತ ಗುಡುಗು,‌ ಮಿಂಚು ಸಹಿತ  ಮಳೆಯಾಗಿದ್ದು, ಇದೇ ವೇಳೆ ಸಿಡಿಲು ಬಡಿದು ಹೆದ್ದಾರಿ‌ ಕಾಮಗಾರಿ ನಿರತ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ಅರಾಟೆಯಲ್ಲಿ ಸಂಭವಿಸಿದೆ.

(ಸಾಂದರ್ಭಿಕ ಚಿತ್ರ)

ಪಂಜಾಬ್ ಮೂಲದ ಅಶುತೋಷ್  ಸಿಂಗ್ (35) ಸಾವನ್ನಪ್ಪಿದವರು. ಜೊತೆಗಿದ್ದ ಇನ್ನೋರ್ವ  ಗಾಯಗೊಂಡಿದ್ದು, ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಹೆದ್ದಾರಿ ಕಾಮಗಾರಿ ನಿರ್ವಹಿಸುವ ಐಆರ್ ಬಿಯ ಕಾರ್ಮಿಕರಾಗಿದ್ದು, ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಅರಾಟೆ ಸೇತುವೆ ಬಳಿ ಕೆಲಸ ಮಾಡುತ್ತಿದ್ದರು. ಸಂಜೆಯ ವೇಳೆ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು, ತೀವ್ರತರದ ಗಾಯಗೊಂಡ ಅಶುತೋಷ್ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರೊಳಗೆ ಅವರು  ಸಾವನ್ನಪ್ಪಿದ್ದಾರೆ.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.