ಕುಂದಾಪುರ: ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹೊಂಬಾಡಿ-ಮಂಡಾಡಿ (ಸುಣ್ಣಾರಿ) ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸುಣ್ಣಾರಿ ಪ್ರಸನ್ನ ಕುಮಾರ ಶೆಟ್ಟಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ವಿ. ಚಂದ್ರಶೇಖರ ಹೆಗ್ಡೆ ದಬ್ಬೆಕಟ್ಟೆ, ಉಪಾಧ್ಯಕ್ಷರಾಗಿ ಸಚಿನ್ ಶೆಟ್ಟಿ ದಬ್ಬೆಕಟ್ಟೆ, ಸಂದೇಶ ಶೆಟ್ಟಿ, ಸತ್ಯನಾರಾಯಣ ಆಚಾರಿ, ವಿಶಾಲ ಶೆಟ್ಟಿ, ಕಾರ್ಯದರ್ಶಿಯಾಗಿ ರವಿ ಪೂಜಾರಿ ದಬ್ಬೆಕಟ್ಟೆ, ಕೋಶಾಧಿಕಾರಿ ನೀತಾ ಶೆಟ್ಟಿ, ಸಹ ಕಾರ್ಯದರ್ಶಿಗಳಾಗಿ ರಮೇಶ ಪೂಜಾರಿ, ಪೂರ್ಣಿಮಾ ಕಾಳಾವರ ಆಯ್ಕೆಯಾಗಿದ್ದು ಇವರನ್ನು ಆಡಳಿತ ಮಂಡಳಿ ಅಧ್ಯಕ್ಷ ಕಿಶೋರ ಕುಮಾರ ಶೆಟ್ಟಿ ಅಭಿನಂದಿಸಿದ್ದಾರೆ.
Comments are closed.