ಕರಾವಳಿ

ಕೋಡಿ‌ ಶ್ರೀರಾಮಮಂದಿರಕ್ಕೆ ಕೋಟ‌ ಶ್ರೀನಿವಾಸ ಪೂಜಾರಿ ಭೇಟಿ

Pinterest LinkedIn Tumblr

ಕುಂದಾಪುರ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಶುಕ್ರವಾರ ಸಂಜೆ ಸಾಸ್ತಾನ ಸಮೀಪದ ಕೋಡಿಯ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿದರು. ಬಳಿಕ ಈ ವ್ಯಾಪ್ತಿಯ ವಿವಿದೆಡೆ ಕಾರ್ಯಕರ್ತರು, ಮುಖಂಡರ ಭೇಟಿ ಮಾಡಿದ್ದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರೊಂದಿಗಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್., ಮುಖಂಡರಾದ ಸುಪ್ರಸಾದ್ ಶೆಟ್ಟಿ, ರಾಜೇಶ್ ಕಾವೇರಿ, ಐರೋಡಿ ವಿಠಲ ಪೂಜಾರಿ, ಸದಾನಂದ ಬಳ್ಕೂರು, ರವೀಂದ್ರ ತಿಂಗಳಾಯ, ಪ್ರಸಾದ್ ಬಿಲ್ಲವ ಕೋಟ, ಅವಿನಾಶ್ ಉಳ್ತೂರು, ಸುರೇಂದ್ರ ಕಾಂಚನ್ ಸಂಗಮ್, ಸ್ಥಳೀಯ ಮುಖಂಡರಾದ ಮಹಾಬಲ ಕುಂದರ್, ಗೀತಾ ಖಾರ್ವಿ, ಪ್ರಭಾಕರ್ ಕುಂದಾಪುರ, ಕೃಷ್ಣ ಪೂಜಾರಿ ಮೊದಲಾದವರಿದ್ದರು.

Comments are closed.