ಕುಂದಾಪುರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಟೇಶ್ವರದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಅಣಕು ವಾರ್ಷಿಕ ಪರೀಕ್ಷೆ ನಡೆಸಲಾಯಿತು.
ಸುಮಾರು 10 ಶಾಲೆಗಳಿಂದ 464 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು ಗುರುವಾರ ವಿಜ್ಞಾನ ವಿಷಯದ ಪರೀಕ್ಷೆಯನ್ನು ನಡೆಸಲಾಯಿತು. ಈ ಬಾರಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಭಯಮುಕ್ತ ಪರೀಕ್ಷೆಯ ವಾತಾವರಣವನ್ನು ನಿರ್ಮಿಸುವ ಮತ್ತು ಪರೀಕ್ಷಾ ಕೇಂದ್ರದ ಪರಿಚಯ ಈ ಎರಡು ಮೂಲ ಮುಖ್ಯ ಉದ್ದೇಶದಿಂದ ಉಪನಿರ್ದೇಶಕರ ವಿಶೇಷ ಕಾಳಜಿಯೊಂದಿಗೆ ಈ ಪರೀಕ್ಷೆಯನ್ನು ನಡೆಸಲಾಯಿತು.
ಸಂಸ್ಥೆಯ ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಮತ್ತು ಶಿಕ್ಷಕ ವೃಂದದವರು ಯಶಸ್ವಿಯಾಗಿ ಅಣುಕು ಪರೀಕ್ಷೆಯನ್ನು ನಡೆಸಿಕೊಟ್ಟರು.
Comments are closed.