ಕರ್ನಾಟಕ

ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯಿಂದ ಧ್ವಜಾರೋಹಣ ಮಾಡಿಸಿದ ಹಾಸನ ಎಸ್‌ಪಿ ಹರಿರಾಂ ಶಂಕರ್

Pinterest LinkedIn Tumblr

ಹಾಸನ: ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಈ ಬಾರಿ ವಿಭಿನ್ನ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿ, ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿಯ ಹಕ್ಕಿಪಿಕ್ಕಿ ಸಮುದಾಯದ ಸಂಗೀತಾ ಅವರು ಧ್ವಜಾರೋಹಣ ನೆರವೇರಿಸಿ, ಗೌರವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಧ್ವಜ ವಂದನೆ ನೆರವೇರಿಸಿ, ಸಿಬ್ಬಂದಿಯಿಂದ ಗೌರವ ಸ್ವೀಕರಿಸಿದರು‌. ಎಸ್ಪಿ ಹರಿರಾಂಶಂಕರ್ ಅವರ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕುಂದಾಪುರದಲ್ಲಿ ಎ.ಎಸ್.ಪಿ ಆಗಿದ್ದ ವೇಳೆಯೂ ಹರಿರಾಂ ಶಂಕರ್ ಅವರು ಕೊರಗ ಸಮುದಾಯದ ಬಾಲಕಿಯಿಂದ ಧ್ವಜಾರೋಹಣ ಮಾಡಿಸಿದ್ದು ಶಾಘನೆಗೆ ಪಾತ್ರವಾಗಿತ್ತು.

 

Comments are closed.