ಕರಾವಳಿ

ಹತ್ಯೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವನ ಹೇಳಿದ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ

Pinterest LinkedIn Tumblr

ವರದಿ- ಯೋಗೀಶ್ ಕುಂಭಾಸಿ

ಮಂಗಳೂರು/ಬೈಂದೂರು: ಹತ್ಯೆಯಾದ ಸುಳ್ಯ ತಾಲ್ಲೂಕು ಬೆಳ್ಳಾರೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಕಾರ ನೀಡಿದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು,‌ ಗೆಜ್ಜೆಗಿರಿ ಸೇವೆಯಲ್ಲಿ ಪ್ರವೀಣ್ ಪರಿಚಯವಾಗಿದ್ದರು. ಆತ್ಮೀಯರಾಗಿದ್ದ ಅವರ ಅಮಾನುಷ ಕೊಲೆ ನೋವುಂಟು ಮಾಡಿದೆ. ಒಳ್ಳೆ ವ್ಯಕ್ತಿಗೆ ಹೀಗಾಗಿದ್ದು ಬೇಜಾರಿನ ವಿಚಾರ. ಸಂಘಟನಾತ್ಮಕವಾಗಿ ಕ್ರಿಯಾಶೀಲವಾಗಿದ್ದವರಿಗೆ ಮುಂದಿನ ದಿನ ಇಂತಹ ಸ್ಥಿತಿ ಬರಬಾರದು ಎಂದರು.

ನನಗೆ ಪ್ರವೀಣ್ ಜೊತೆ ಉತ್ತಮ ಬಾಂಧವ್ಯವಿತ್ತು. ಈ ದುರ್ಘಟನೆ ನೋವು ನೀಡಿದೆ ಎಂದು ಗೋವಿಂದ ಬಾಬು ಪೂಜಾರಿಯವರು ಹೇಳಿದಾಗ, ನಿಮ್ಮ ಸಾಧನೆಯನ್ನುದ್ದೇಶಿಸಿ ಯುವಕರಿಗೆ ನೀವು ಮಾದರಿ ಎನ್ನುವುದನ್ನು ಯಾವಾಗಲೂ ಹೇಳುತ್ತಿದ್ದರು ಎಂದು ಪ್ರವೀಣ್ ಧರ್ಮಪತ್ನಿ ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ‌ಪಂಚಾಯತ್ ಮಾಜಿ ಸದಸ್ಯೆ ಗೀತಾಂಜಲಿ‌ ಸುವರ್ಣ ಇದ್ದರು.

Comments are closed.