ಕರಾವಳಿ

ಕೌಟುಂಬಿಕ ಕಲಹ; ನೊಂದ ಪತಿ ನೇಣುಬಿಗಿದು ಆತ್ಮಹತ್ಯೆ | ಕಾರ್ಕಳದಲ್ಲಿ ಘಟನೆ

Pinterest LinkedIn Tumblr

ಉಡುಪಿ: ದಂಪತಿಗಳ ನಡುವೆ ಹಣಕಾಸು ಸಂಬಂಧಿಸಿದ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಪತಿ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಬೆಳ್ಮಣ್ ಪವಿತ್ರ ನಗರದಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಲೋರೆನ್ಸ್ ರೋಶನ್ ಲೋಬೋ(35) ಎಂದು ಗುರುತಿಸಲಾಗಿದೆ.

ಲೋರೆನ್ಸ್ ರೋಶನ್ ಲೋಬೋ ಅವರು ಎರಡನೇ ಪತ್ನಿ ರಾಣಿ ಸುನಿಲ್ ದಾಸ್ ಹಾಗೂ 7 ತಿಂಗಳ ಮಗುವಿನೊಂದಿಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಪವಿತ್ರನಗರ ಎಂಬಲ್ಲಿ ವಾಸವಿದ್ದು, ದಂಪತಿಯ ನಡುವೆ ಅಗ್ಗಿಂದಾಗೆ ಹಣದ ವಿಚಾರದಲ್ಲಿ ಜಗಳ ಏರ್ಪಡುತ್ತಿತ್ತೆನ್ನಲಾಗಿದೆ.

ಪತ್ನಿ ಲೋರೇನ್ಸ್ ರೋಶನ್ ಲೋಬೋರವರಿಗೆ ಹಣದ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದರೆಂಬ ಆರೋಪವು ಕೇಳಿಬಂದಿದ್ದು, ಅದೇ ಕಾರಣದಿಂದ ಮನನೊಂದ ಲೋರೇನ್ಸ್ ರೋಶನ್ ಲೋಬೋ ಮನೆಯ ಮುಂಭಾಗದ ಖಾಸಗಿ ಜಾಗದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತ ಲೋರೆನ್ಸ್ ರೋಶನ್ ಲೋಬೋ ಸಹೋದರಿ ರೇಶ್ಮಾ ನೀಡಿದ ದೂರಿನನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.