ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬಿ.ಹೆಚ್.ಎಂ ರಸ್ತೆ ಬಳಿಯಿರುವ ಮರದ ಮಿಲ್’ವೊಂದಕ್ಕೆ ಸೋಮವಾರ ನಸುಕಿನ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ಹೊತ್ತಿ ಉರಿದ ಘಟನೆ ಸಂಭವಿಸಿದೆ.
ಜ.3 ಸೋಮವಾರ ಈ ಘಟನೆ ನಡೆದಿದೆ. ನಗರದ ಬಿ.ಎಚ್.ಎಂ ರಸ್ತೆಯಲ್ಲಿರುವ ಮಧುಕರ್ ಆಚಾರ್ ಎಂಬುವವರಿಗೆ ಸೇರಿದ ಕಾರ್ಖಾನೆ ಇದಾಗಿದೆ.
ಬೆಂಕಿ ನಂದಿಸಲು ಸ್ಥಳೀಯರಿಂದ ಯತ್ನಿಸಿದ್ದು ಸ್ಥಳಕ್ಕಾಗಮಿಸಿದ ಕುಂದಾಪುರ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ಹತೋಟಿಗೆ ತಂದರು. ಸೋಮವಾರ ನಸುಕಿನ ಹೊತ್ತು ಅಂದಾಜು 3 ಗಂಟೆ ಸುಮಾರಿಗೆ ಹೊತ್ತಿಕೊಂಡ ಬೆಂಕಿ ಅನಾಹುತಕ್ಕೆ ಶಾರ್ಟ್ ಸರ್ಕ್ಯುಟ್’ನಿಂದಾಗಿ ಕಾರಣ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
Comments are closed.