ಬೆಂಗಳೂರು: ಕನಸು ಹೊತ್ತು ತನ್ನೂರು ಬಿಟ್ಟು ಮಹಾನಗರಿ ಬೆಂಗಳೂರಿಗೆ ಬಂದ ಯುವತಿ ಇದೀಗಾ ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ನೇಣಿಗೆ ಕೊರಳೊಡ್ಡಿ ಬಾರದಲೋಕಕ್ಕೆ ಪಯಣಿಸಿದ್ದಾಳೆ.
ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಯುವತಿ ಸಾಕಮ್ಮ(ಸಾಕ್ಷಿ) ಮೃತ ಯುವತಿ.
ಬೆಂಗಳೂರಿನ ದೊಡ್ಡಬಿದರಕಲ್ಲು ಗ್ರಾಮದಲ್ಲಿರುವ ತನ್ನ ಅಕ್ಕನ ಮನೆಯಲ್ಲಿದ್ದುಕೊಂಡು, ಯಶವಂತಪುರದ ಮೆಟ್ರೋ ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡ್ತಿದ್ದಳು. ಅಲ್ಲಿಯೇ ಆಕೆಗೆ ಅರುಣ್ ಎಂಬಾತನ ಪರಿಚಯವಾಗಿತ್ತು. ಆಕೆಯ ಹಿಂದೆ ಬಿದ್ದಿದ್ದ ಅರುಣ್ ಕೆಲದಿನಗಳಿಂದ ಮದುವೆ ಆಗುವಂತೆ ಪೀಡಿಸುತ್ತಿದ್ದ. ಈ ವಿಷಯವನ್ನ ಸಾಕ್ಷಿ ಮನೆಯಲ್ಲೂ ತಿಳಿಸಿದ್ದಳೆನ್ನಲಾಗಿದೆ. ಆಕೆಗೆ ಬೇರೆ ಮದುವೆ ಮಾಡಿದರೆ ಸಮಸ್ಯೆ ಸರಿ ಹೋಗಬಹುದು ಎಂದು ಸಾಕ್ಷಿ ಮನೆಯವರು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು.
ಸಾಕ್ಷಿಗೆ ಮದುವೆ ಮಾಡಲು ಮುಂದಾದ ಬಗ್ಗೆ ವಿಷಯ ತಿಳಿದ ಅರುಣ್, ಸಾಕ್ಷಿಯ ಭಾವ ಪ್ರಜ್ವಲ್ಗೆ ತನ್ನ ಸ್ನೇಹಿತ ಗೋಪಾಲನ ಕಡೆಯಿಂದ ಪೊಲೀಸರ ಸೋಗಿನಲ್ಲಿ ಕರೆ ಮಾಡಿಸಿದ್ದ. ಬಸವೇಶ್ವರ ಪೊಲೀಸ್ ಠಾಣೆಯಿಂದ ಕರೆ ಮಾಡ್ತಿದ್ದೀನಿ. ಅರುಣ್ ಎಂಬ ಯುವಕ ನಿಮ್ಮ ಹೆಸರೇಳಿ ಸೂಸೈಡ್ ಮಾಡಿಕೊಳ್ಳೋಕೆ ಯತ್ನಿಸಿದ್ದಾನೆ. ಅವನನ್ನ ಸಾಕ್ಷಿಗೆ ಮದುವೆ ಮಾಡಿಕೊಡಿ ಇಲ್ಲವಾದ್ರೆ ಎಫ್ಐಆರ್ ದಾಖಲಿಸುತ್ತೇವೆ ಅಂತ ಬೆದರಿಸಿದ್ದ. ಈ ಸುದ್ದಿ ಕೇಳಿ ಬೆದರಿದ ಸಾಕ್ಷಿ, ಅಕ್ಕನ ಮನೆಯಲ್ಲೇ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೀಣ್ಯಾ ಪೊಲೀಸರು ಆರೋಪಿಗಳಾದ ಅರುಣ್ ಹಾಗೂ ನಕಲಿ ಪೊಲೀಸ್ ಗೋಪಾಲ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Comments are closed.