ಕರಾವಳಿ

ಕಾರ್ಕಳದಲ್ಲಿ 80 ವರ್ಷದ ವೃದ್ಧನನ್ನು ಕಚ್ಚಿ ಸಾಯಿಸಿದ ಬೀದಿ ನಾಯಿಗಳು..!

Pinterest LinkedIn Tumblr

ಉಡುಪಿ: ಅಂಗಡಿ ಬದಿಯಲ್ಲಿ ಮಲಗಿದ್ದ ವೃದ್ಧರೊಬ್ಬರು ಬೀದಿ ನಾಯಿಗಳ ದಾಳಿಗೊಳಗಾಗಿ ದಾರುಣವಾಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಕಾರ್ಕಳದ ಹಿರ್ಗಾನ ಎಂಬಲ್ಲಿ ನಡೆದಿದೆ.

ಹೆರ್ಮುಂಡೆಯ ಸಾಧು ಪೂಜಾರಿ(80) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.

(ಸಾಂದರ್ಭಿಕ ಚಿತ್ರ)

ಮೃತ ಸಾಧು ಪೂಜಾರಿ ಅವರು ಕಳೆದ 40 ವರ್ಷಗಳಿಂದ ಮನೆಗೆ ಹೋಗದೆ ಕೂಲಿ ಕೆಲಸ ಮಾಡಿಕೊಂಡು ಹಿರ್ಗಾನ ಮೂಜೂರು ಪರಿಸರದ ಅಂಗಡಿ ಬದಿಯಲ್ಲಿ ರಾತ್ರಿ ಮಲಗುತ್ತಿದ್ದರು. ವಿಪರೀತ ಮದ್ಯ ಸೇವನೆ ಮಾಡಿ, ಹಿರ್ಗಾನ ಸ್ವಾಗತ್ ಕಾಂಪ್ಲೆಕ್ಸ್ ಕಟ್ಟಡದ ಎದುರು ಮಲಗಿದ್ದರು.

ರಾತ್ರಿ ವೇಳೆಗೆ ಬೀದಿ ನಾಯಿಗಳು ಅವರ ಮೇಲೆ ದಾಳಿ ನಡೆಸಿ ‌ಕಚ್ಚಿ ಗಾಯಗೊಳಿಸಿವೆ. ಇದರಿಂದ ವಿಪರೀತ ರಕ್ತಸ್ರಾವವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.