ಕರಾವಳಿ

ನದಿಗೆ ಬಿದ್ದ ಮಗ, ರಕ್ಷಿಸಲು ಹೊದ ತಾಯಿ ಇಬ್ಬರು ದುರ್ಮರಣ: ಮರವಂತೆ ಸಮೀಪದ ಪಡುಕೋಣೆಯಲ್ಲಿ ಘಟನೆ

Pinterest LinkedIn Tumblr

ಕುಂದಾಪುರ: ಕುಂದಾಪುರದ ಪತ್ರಕರ್ತ ನೊಯೆಲ್ ಚುಂಗಿಗುಡ್ಡೆ ಅವರ ಪತ್ನಿ ಮತ್ತು ಮಗು ನೀರಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.

ಮೃತರನ್ನು ರೊಸಾರಿಯಾ (35) ಮತ್ತು ಅವರ ಮಗು ಶಾನ್‌ (11) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಬೈಂದೂರು ತಾಲೂಕಿನ ಮರವಂತೆ‌ ಸಮೀಪದ ಪಡುಕೋಣೆ ಚುಂಗಿಗುಡ್ಡೆಯ ನಿವಾಸಿ ನೊಯಲ್ ಅವರ ಪತ್ನಿ ರೊಸಾರಿಯಾ ಮತ್ತು ಶಾನ್‌‌ ಎನ್ನುವವರು ಎಂದಿನಂತೆ ಶನಿವಾರ ನದಿ ಪಕ್ಕದಲ್ಲಿ ವಾಕಿಂಗ್‌ ಮಾಡಲು ತೆರಳಿದ್ದು, ಆಕಸ್ಮಿಕವಾಗಿ ಮಗ ಶಾನ್‌ ನೀರಿಗೆ ಬಿದ್ದಿದ್ದು, ಮಗನನ್ನು ರಕ್ಷಿಸಲು ಹೋದ ವೇಳೆ ತಾಯಿ ಕೂಡ ನೀರು ಪಾಲಾಗಿದ್ದಾರೆ. ಶಾನ್‌ ಮೃತದೇಹ ಮೊದಲು ಪತ್ತೆಯಾಗಿದ್ದು ತಾಯಿಯ ಮೃತದೇಹ ಸಂಜೆ ವೇಳೆ‌ ಮಾರಸ್ವಾಮಿ ಸೇತುವೆ ಅಡಿ ಭಾಗದಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪಿಎಸ್ಐ ನಂಜಾ ನಾಯ್ಕ್, ಕುಂದಾಪುರ ಅಗ್ನಿಶಾಮಕದಳದವರು ಭೇಟಿ ನೀಡಿದ್ದಾರೆ.

Comments are closed.