ಕರಾವಳಿ

ಅಬ್ದುಲ್‌ ಅಝೀಝ್ ಆರ್‌.ಕೆ.ಸಿ ಗೆ ಅಪ್ರತಿಮ ಭಾರತಿಯ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು. 2021ನೇ ಸಾಲಿನ ಪ್ರತಿಷ್ಟಿತ ಐಕಾನಿಕ್ ಇಂಡಿಯನ್ ಅವಾರ್ಡ್ ಪುರಸ್ಕೃತ ಅಬ್ದುಲ್ ಅಝೀಝ್ ಆರ್.ಕೆ.ಸಿ ಅವರನ್ನು ಮಂಗಳೂರಿನ ಅಬ್ಬಕ್ಕ ಕ್ವೀನ್ ಕ್ರೂಝ್‍ನಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳ ಸಾಧನೆಗಾಗಿ ಕೊಡಮಾಡುವ ಐಕಾನಿಕ್ ಇಂಡಿಯನ್ ಅವಾರ್ಡ್‍ಗೆ ಸಮಾಜಸೇವಕ ಅಬ್ದುಲ್ ಅಝೀಝ್ ಅವರು ಆಯ್ಕೆಯಾಗಿದ್ದು, ಕೋವಿಡ್ ಸಂದರ್ಭದಲ್ಲಿನ ಮಾನವೀಯ ಸೇವೆಯನ್ನು ಗುರುತಿಸಿ ಇಂಟರ್‍ನ್ಯಾಷನಲ್ ಕಲ್ಚರಲ್ ಫೆಸ್ಟ್ ಅಫ್ ಇಂಡಿಯಾ ಮತ್ತು ಎಸ್.ಕೆ ಮುನಿಸಿಪಲ್ ಎಂಪ್ಲಾಯೀಸ್ ಯೂನಿಯನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಮಂಗಳೂರಿನ ಬೊಕ್ಕಪಟ್ಣದ ಹಿನ್ನೀರಿನಲ್ಲಿ ರಾಣಿ ಅಬ್ಬಕ್ಕ ನೌಕೆಯಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರು ಅಬ್ದುಲ್ ಅಝೀಝ್ ಅವರನ್ನು ಸನ್ಮಾನಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಎಂಎಲ್‍ಸಿ ಡಿಎಸ್ ವೀರಯ್ಯ, ಕಾರ್ಪೋರೇಟರ್ ಮನೋಹರ ಶೆಟ್ಟಿ, ಗೋ,ನಾ ಸ್ವಾಮಿ, ಮಂಜುನಾಥ್ ಸಾಗರ್, ಬಾಲು, ನಟ ರಘು ಭಟ್, ನಟಿ ಬಿಂಬಶ್ರೀ ನೀನಾಸಂ ಲೀಲಾಧರ್ ಬೈಕಂಪಾಡಿ ಮತ್ತಿತರರು ಪ್ರಶಸ್ತಿ ಪ್ರಧಾನ ಮಾಡಿದರು.

Comments are closed.