ಕರಾವಳಿ

ಪ್ರೊಫೆಸರ್ ಕೊರೋನಾಕ್ಕೆ ಬಲಿ : ಸುರತ್ಕಲ್‌ನ ಎನ್ಐಟಿಕೆ ಕ್ಯಾಂಪಸ್ ಕ್ಲೋಸ್!

Pinterest LinkedIn Tumblr

ಮಂಗಳೂರು ಮೇ 13 : ಅಸ್ಸಾಂ ಮೂಲದ ಎನ್ ಐಟಿಕೆ ಪ್ರೊಫೆಸರ್ ಒಬ್ಬರು ಕೊರೋನಾಕ್ಕೆ ಬಲಿಯಾಗಿದ್ದು ಕ್ಯಾಂಪಸ್ ನಲ್ಲಿ 40ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕ್ಯಾಂಪಸ್ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.

ವಾಕಿಂಗ್, ಕ್ರಿಕೆಟ್, ವಾಹನ ಕಲಿಕೆ ಇತ್ಯಾದಿ ವಿಷಯಕ್ಕೆ ಸಾರ್ವಜನಿಕರು ಕ್ಯಾಂಪಸ್ ನಲ್ಲಿನ ಮೈದಾನ ಬಳಸುತ್ತಿದ್ದು ಸದ್ಯ ಅದೆಲ್ಲದಕ್ಕೂ ಅವಕಾಶ ನಿರಾಕರಿಸಲಾಗಿದೆ.

ಅಲ್ಲಲ್ಲಿ ಬ್ಯಾರಿಕೇಡ್ ಬಳಸಿ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಇದೇ ರೀತಿ ಸುರತ್ಕಲ್ ಭಾಗದಲ್ಲಿ ಕೊರೋನಾ ಸೋಂಕು ಹೆಚ್ಚು ಕಾಣಿಸಿಕೊಂಡಿರುವ ಪ್ರದೇಶಕ್ಕೂ ಹೊರಗಿನವರ ಪ್ರವೇಶ ನಿರ್ಬಂಧಿಸಿ ಸ್ಥಳೀಯರಲ್ಲಿ ಎಚ್ಚರಿಕೆಯಿಂದ ಇರುವಂತೆ ನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Comments are closed.