ಕರಾವಳಿ

ಯುಗಾದಿ ಮಹೋತ್ಸವ : 7ನೇ ದಿನದ ಉತ್ಸವದಲ್ಲಿ ತಟ್ಟಿ ರಾಯನಿಗೂ ಕೊರೊನ ಮಾಸ್ಕ್

Pinterest LinkedIn Tumblr

ಮಂಗಳೂರು : ಇಲ್ಲಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಯುಗಾದಿ ಮಹೋತ್ಸವ ನಡೆಯುತ್ತಿದ್ದು ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇನ್ದ್ರ ಸರಸ್ವತೀ ಮಹಾಸ್ವಾಮಿಜಿ ಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು

7ನೇ ದಿನದ ಉತ್ಸವ ಸಂಜೆ ಶ್ರೀ ಕಾಳಿಕಾಂಬೆ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ವಿಶೇಷ ಬಲಿ ಹೊರಟು ದೈವದ ಭೇಟಿ, ದೇವರ ಚಂದ್ರಮಂಡಲೋತ್ಸವ, ಪಲ್ಲಕಿಯಲ್ಲಿ 5 ಬಾರಿ ಕ್ಷೇತ್ರದಲ್ಲಿ ಸವಾರಿ, ಶ್ರೀ ವೆಂಕಟರಮಣ ಕ್ಷೇತ್ರದ ತನಕ ಬೀದಿ ಸವಾರಿ ಜರಗಿತು.

ಕೊರೊನಾ ಹಿನ್ನೆಲೆಯಲ್ಲಿ ಇದೀಗ ಸರಕಾರದ ಆದೇಶ-ಮಾರ್ಗಸೂಚಿ ಜಾರಿಯಾಗಿರುವ ಕಾರಣ ಅದಕ್ಕೆ ಅನುಗುಣವಾಗಿ ನಡೆದುಕೊಂಡು ಕ್ಷೇತ್ರದಲ್ಲಿ ಉತ್ಸವ ಜರಗಿತು.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀ ಕಾಂತ ಶರ್ಮಾರ ಆಚಾರ್ಯತ್ವದಲ್ಲಿ ನಡೆಯಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಧನಂಜಯ ಪುರೋಹಿತ್ ಮತ್ತು ವಿಘ್ನೇಶ್ ಪುರೋಹಿತ್, ಆಡಳಿತ ಮೊಕ್ತೇಸರರಾದ ಕೆ. ಕೇಶವ ಆಚಾರ್ಯ, ಎರಡನೇ ಮೊಕ್ತೇಸರ ಎಂ. ಸುಂದರ್ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಬಿಜೈ, ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ದಾರ ಸಮಿತಿ, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ, ದ. ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಯುವ ವೇದಿಕೆ ವಿಶ್ವಕರ್ಮ ಯುವ ಮಿಲನ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ತಟ್ಟಿ ರಾಯನಿಗೂ ಕೊರೊನ ಮಾಸ್ಕ್ :

ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಯುಗಾದಿ ಮಹೋತ್ಸವ ನಡೆಯುತ್ತಿದ್ದು ಏಳನೇ ಉತ್ಸವದ ಸಂದರ್ಭ ತಟ್ಟಿ ರಾಯನಿಗೂ ಕೊರೊನ ಮುಂಜಾಗ್ರತಾ ಕ್ರಮವಾಗಿ ಎಸ್. ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿ ಯವರು ನೀಡಿದ ಮಾಸ್ಕ್ ಹಾಕಿರುವುದು ವಿಶೇಷವಾಗಿತ್ತು

Comments are closed.