ಕರಾವಳಿ

ನಾಳೆ ಪ್ರಕಾಶ್ ಸಾಲಿಯಾನ್ ಪದಗ್ರಹಣ ಸಮಾರಂಭ : ಪೂಜಾರಿಯವರಿಂದ ಶುಭ ಹಾರೈಕೆ

Pinterest LinkedIn Tumblr

ಪೂಜಾರಿಯವರಿಂದ ಆಶೀರ್ವಾದ ಪಡೆದ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಪ್ರಕಾಶ್ ಸಾಲಿಯಾನ್

ಮಂಗಳೂರು, ಏಪ್ರಿಲ್.03 : ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಪ್ರಕಾಶ್.ಬಿ.ಸಾಲಿಯಾನ್ ರವರ ಪದಗ್ರಹಣ ಸಮಾರಂಭ ನಾಳೆ (03/04/2021) ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಮಿನಿ ಸಭಾಂಗಣದಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಪ್ರಕಾಶ್.ಬಿ.ಸಾಲಿಯಾನ್ ರವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಇದೇ ವೇಳೆ ಏಪ್ರಿಲ್ 3ರಂದು ನಡೆಯಲಿರುವ ಪದಗ್ರಹಣ ಕಾರ್ಯಕ್ರಮದ ಅಹ್ವಾನ ಪತ್ರಿಕೆಯನ್ನು ಪೂಜಾರಿಯವರಿಗೆ ನೀಡಿ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮೆಲ್ಲರಿಗೂ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪ್ರಕಾಶ್ ಸಾಲಿಯಾನ್ ವಿನಂತಿಸಿದರು.

ಆಹ್ವಾನ ಸ್ವೀಕರಿಸಿದ ಪೂಜಾರಿಯವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಪಾಲಿಸಿಕೊಂಡು, ಜನಪರ ಕೆಲಸಕಾರ್ಯಗಳ ಮೂಲಕ ಜನರ ವಿಶ್ವಾಸಗಳಿಸಿಕೊಂಡು, ಸೇವಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಎಲ್ಲರ ಜೊತೆ ಬೆರೆತು ರಾಜಕೀಯ ಕ್ಷೇತ್ರದಲ್ಲಿ ಓರ್ವ ಧೀಮಂತ ನಾಯಕನಾಗಿ ಮೂಡಿಬರಬೇಕು ಎಂದು ಪ್ರಕಾಶ್ ಸಾಲಿಯಾನ್ ಅವರಿಗೆ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಪ್ರಮುಖರಾದ ಲಿಯಾಕತ್ ಶಾ ಹಾಗೂ ತನ್ವಿರ್ ಶಾ ಉಪಸ್ಥಿತರಿದ್ದರು.

Comments are closed.