ಬೆಂಗಳೂರು: ಸಾಹುಕಾರ್ ಎಂದು ಬಿರುದು ಪಡೆದ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಸಿಡಿ ರಿಲೀಸ್ ಆಗಿದ್ದು ರಾಜ್ಯ ರಾಜಕೀಯದಲ್ಲಿ ವ್ಯಾಪಕ ಸಂಚಲನ ಸೃಷ್ಟಿಯಾಗಿದೆ.
ದೆಹಲಿಯ ಕರ್ನಾಟಕ ಭವನದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ನಡೆಸಿದ್ದಾರೆಂದು ಆರೋಪಿಸಿದ ದೂರುದಾರ ಸಚಿವರು ಸರ್ಕಾರಿ ಐಬಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಿರುಚಿತ್ರ ನಿರ್ಮಿಸಲು ಸಹಕಾರಕ್ಕಾಗಿ ತನ್ನ ಬಳಿ ಬಂದ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಕಾಮದಾಟಕ್ಕೆ ಬಳಸಿಕೊಂಡಿದ್ದಾರೆನ್ನುವ ಆರೋಪ ಮಾಡಲಾಗಿದೆ. ಆಕೆಗೆ ನ್ಯಾಯ ಒದಗಿಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ. ಈ ಬಗ್ಗೆ ಖುದ್ದು ರಾಸಲೀಲೆಯ ಸಿಡಿ ಹಾಗೂ ಆಡಿಯೋವನ್ನಹ ಸಲ್ಲಿಕೆ ಮಾಡಿದ ದಿನೇಶ್ ಕಲ್ಲಹಳ್ಳಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ರಾಸಲೀಲೆ ಸಿಡಿ ನೀಡಿದ್ದಾರೆ.
Comments are closed.