ಕರಾವಳಿ

ರಾಡ್‌ನಿಂದ ತಲೆಗೆ ಹೊಡೆದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿಗಾಗಿ ಶೋಧ | ಪಾರಂಪಳ್ಳಿಯಲ್ಲಿ ಘಟನೆ

Pinterest LinkedIn Tumblr

ಉಡುಪಿ: ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ಯುವಕನ ಪತ್ತೆಗೆ ಕೋಟ ಪೊಲೀಸರು ಬಲೆಬೀಸಿದ್ದಾರೆ. ಉಡುಪಿ ಜಿಲ್ಲೆ ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಪಡುಕೆರೆ ಎಂಬಲ್ಲಿ ಈ ಘಟನೆ ನಡೆದಿತ್ತು.

ಅಕ್ಷಯ್ ಎಂಬಾತ ಮಾರಣಾಂತಿಕ ಹಲ್ಲೆಗೊಳಗಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ. ಪಾರಂಪಳ್ಳಿ ಪಡುಕೆರೆ ನಿವಾಸಿ ಗಗನ್ ಪೂಜಾರಿ (25) ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ.

ಘಟನೆ ವಿವರ: ಯಾವುದೋ ಕಾರಣಕ್ಕಾಗಿ ಆರೋಪಿ ಗಗನ್ ಹಾಗೂ ಹಲ್ಲೆಗೊಳಗಾದ ಅಕ್ಷಯ್ ನಡುವೆ ಮೊಬೈಲ್ ನಲ್ಲಿ ಪರಸ್ಪರ ಗಲಾಟೆ ನಡೆದಿತ್ತು. ರಾತ್ರಿ ಊಟ ಮುಗಿಸಿ ಗೆಳೆಯ ಚೇತನ ಎಂಬಾತನ ಜೊತೆ ಕೋಟದ ಹೋಟೆಲ್‌ವೊಂದರಲ್ಲಿ ಊಟದ ಮುಗಿಸಿ ಆತನ ಜೊತೆ ಸ್ಕೂಟಿಯಲ್ಲಿ ಮನೆಯತ್ತ ತೆರಳುವಾಗ ದಾರಿಯಲ್ಲಿ ಗಗನ್‌ ಮನೆ ಎದುರು ರಸ್ತೆಯ ಮೇಲೆ ಗಗನ್‌, ಆತನ ತಂದೆ-ತಾಯಿ ನಿಂತಿದ್ದು ಅವರಲ್ಲಿ ಗಗನ್‌ ಇವರಿಬ್ಬರು ತೆರಳುತ್ತಿದ್ದ ಸ್ಕೂಟಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು ಚೇತನ್ ಅಕ್ಷಯನನ್ನು ತಡೆಯುತ್ತಿದ್ದು, ಗಗನ್‌ನನ್ನು ಅವನ ಅಪ್ಪ ಅಮ್ಮ ಸಮಾಧಾನ ಮಾಡುತ್ತಿದ್ದರು. ಆದರೆ ಗಗನ್‌ ಸುಮ್ಮನಿರದೇ ಏಕಾ ಏಕಿ ಅಕ್ಷಯನ ಹಿಂದುಗಡೆ ಬಂದು ಒಂದು ಕಬ್ಬಿಣದ ರಾಡ್‌ನಿಂದ ಬಲವಾಗಿ ಅಕ್ಷಯನ ತಲೆಯ ಹಿಂಬದಿಗೆ ಹೊಡೆದು ನಂತರ ರಾಡ್‌ನ್ನು ಅಲ್ಲೆ ಬಿಸಾಡಿ ಅಲ್ಲಿಂದ ಪರಾರಿಯಾಗಿದ್ದ. ನೋಡುವಷ್ಟರಲ್ಲಿ ಅಕ್ಷಯ ಒಮ್ಮೇಲೆ ಕುಸಿದು ರಸ್ತೆಯಲ್ಲಿ ಬಿದ್ದಿದ್ದ.

ತಲೆಯಿಂದ ರಕ್ತಸ್ರಾವವಾಗಿ ಮಾತನಾಡಲೂ ಆಗದೆ ತೀವೃ ಅಸ್ವಸ್ಥಗೊಂಡಿದ್ದ ಅಕ್ಷಯನನ್ನು ಚೇತನ್ ಹಾಗೂ ಸ್ನೇಹಿತರು ಚಿಕಿತ್ಸೆಯ ಬಗ್ಗೆ ಆರೋಪಿ ತಂದೆ ಶಂಭು‌ ಪೂಜಾರಿ ಕಾರಿನಲ್ಲಿ ಹಾಕಿಕೊಂಡು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಅಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ದಾಖಲು ಮಾಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.