ಕರಾವಳಿ

ಉದ್ಭವ ಸಿದ್ಧಿ ಶ್ರೀ ವಿನಾಯಕ ದೇವಸ್ಥಾನದ 2 ಲಕ್ಷ ಮೌಲ್ಯದ ಘಂಟೆ, ಆರತಿ ತಟ್ಟೆಗಳನ್ನು ಕದ್ದ ಚೋರರು..!

Pinterest LinkedIn Tumblr

ಕುಂದಾಪುರ: ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ದೇವಸ್ಥಾನವೊಂದರಲ್ಲಿ ಕಳ್ಳರು ಕೈಚಳಕ ತೋರಿದ್ದು 2 ಲಕ್ಷ ಅಂದಾಜು ಮೌಲ್ಯದ ಸೊತ್ತು ಕದ್ದಿದ್ದಾರೆ.

ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ನುಕ್ಯಾಡಿ ಶ್ರೀ ಉದ್ಬವ ಸಿದ್ದಿ ವಿನಾಯಕ ದೇವಸ್ಥಾನದ ಸುತ್ತಲು ಕಟ್ಟಿರುವ ಶಬ್ದದ ಘಂಟೆಗಳಲ್ಲಿ 106 ಕೆ ಜಿ ತೂಕದ ಒಂದು ದೊಡ್ಡ ಶಬ್ದ ಘಂಟೆ, ವಿವಿಧ ತೂಕದ ಸುಮಾರು 500 ರಿಂದ 600 ಶಬ್ಧ ಘಂಟೆಗಳು ಹಾಗೂ ವಿವಿಧ ತರಹದ ಸುಮಾರು 60 ಆರತಿ ತಟ್ಟೆಗಳನ್ನು ಕಳವು ಮಾಡಿದ್ದಾರೆ. ಕಳವಾದ ಸ್ವತ್ತುಗಳ ಮೌಲ್ಯ 2,೦೦,೦00/- ರೂಪಾಯಿ ಆಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.