ಕರಾವಳಿ

ಬಿಲ್ಲವ ಸಮಾಜದ ಬಗ್ಗೆ ಅವಹೇಳನೆ: ಬೇಷರತ್ ಕ್ಷಮೆ ಯಾಚಿಸುವಂತೆ ಅಧಿಕಾರಿಯವರಿಗೆ ವಿಹಿಂಪ ಆಗ್ರಹ

Pinterest LinkedIn Tumblr

  ಶರಣ್ ಪಂಪವೆಲ್                             ಜಗದೀಶ್ ಅದಿಕಾರಿ

ಮಂಗಳೂರು, ಫೆಬ್ರವರಿ.06: ಬಿಜೆಪಿ ಮುಖಂಡ ಜಗದೀಶ್ ಅದಿಕಾರಿಯವರು ಬಿಲ್ಲವ ಸಮಾಜವನ್ನು ಕಡೆಗಣಿಸಿ ಮಾತನಾಡಿದ ಹೇಳಿಕೆಯು ಖಂಡನೀಯವಾಗಿದ್ದು ಮಾತ್ರವಲ್ಲದೆ ” ಬ್ಯಾರಿಲು ಆಂಡಲಾ ಅವು ಈ ಜನಾರ್ಧನ ಪೂಜಾರಿಲು ಅತ್ತ್” ಎಂದು ಜಗದೀಶ್ ಅದಿಕಾರಿಯವರು ಆಡಿದ ಮಾತು ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನವಾಗಿದೆ.

ಈ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ ಮಾತ್ರವಲ್ಲದೆ ಜಗದೀಶ್ ಅದಿಕಾರಿಯವರು ಈ ಬಗ್ಗೆ ಬೇಷರತ್ ಕ್ಷಮೆ ಯಾಚಿಸಬೇಕೆಂದು ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಆಗ್ರಹಿಸಿದ್ದಾರೆ

Comments are closed.