ಕರಾವಳಿ

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ : ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ವಿವರ

Pinterest LinkedIn Tumblr

ಮಂಗಳೂರು ಜನವರಿ.06 : ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು,  ಪ್ರಸ್ತುತ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ವಿವರ ಇಂತಿವೆ.

ಜಾನಪದ ಗಾಯನದಲ್ಲಿ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದ ಎಂ.ಕೆ. ಸಿದ್ಧರಾಜು, ಸೋಬಾನೆಪದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹೊನ್ನಸಂದ್ರದ ಹೊನ್ನಗಂಗಮ್ಮ, ತಮಟೆ ವಾದನಕ್ಕೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಬ್ರಹ್ಮಣಿಪುರದ ತಿಮ್ಮಯ್ಯ ತಂದೆ, ಭಜನೆ ತತ್ವಪದಕ್ಕೆ ಕೋಲಾರ ಜಿಲ್ಲೆ ಹಾಗೂ ತಾಲೂಕಿನ ಮಲ್ಲನಾಯಕನ ಹಳ್ಳಿಯ ನಾಗಮಂಗಲದ ಕೆ.ಎನ್. ಚಂಗಪ್ಪ, ಕೀಲುಕುದುರೆ ಗೆ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲೂಕಿನ ಕೇತೇನ ಹಳ್ಳಿರಸ್ತೆಯ ನಾರಾಯಣಪ್ಪ, ವೀರಭದ್ರನ ಕುಣಿತಕ್ಕೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಸಿ. ವಿ. ವೀರಣ್ಣ, ಸೋಬಾನೆ ಹಾಡುಗಾರಿಕೆಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿಯ ಭಾಗ್ಯಮ್ಮ, ಮದುವೆ ಹಾಡು ಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗೊಲ್ಲರ ಹಟ್ಟಿಯ ಕೆಂಚಮ್ಮ, ಜಾನಪದ ಹಾಡುಗಾರಿಕೆಗೆ ಶಿವಮೊಗ್ಗದ ವಿನೋಬಾ ನಗರದ ಕೆ. ಯುವರಾಜು, ಕಂಸಾಳೆ ಹಾಡುಗಾರಿಕೆಗೆ ಮೈಸೂರಿನ ವಿದ್ಯಾರಣ್ಯಪುರಂನ ಸುಯೋಜ ಫಾರಂ ರಸ್ತೆಯ ಕುಮಾರಸ್ವಾಮಿ, ಕೋಲಾಟಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿಪುರದ ಭೂಮಿಗೌಡ, ಹಾಡುಗಾರಿಕೆಗೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಂಚಮಾರನ ಹಳ್ಳಿಯ ಗ್ಯಾರಂಟಿ ರಾಮಣ್ಣ, ಚೌಡಿಕೆ ಪದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೌಳ ಹಿರಿಯೂರು ಗ್ರಾಮದ ಭೋಗಪ್ಪ ಎಂ. ಸಿ., ಗೊಂಬೆಕುಣಿತಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗೋಪಾಲಕೃಷ್ಣ ಬಂಗೇರಾ ಮಧ್ವ, ಕರಗ ಕೋಲಾಟಕ್ಕೆ ಉಡುಪಿ ಜಿಲ್ಲೆಯ ಕಲ್ಮಾಡಿ ಗ್ರಾಮದ ರಮೇಶ್ ಕಲ್ಮಾಡಿ, ಬೊಳೋ ಪಾಟ್ ಗೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಯವಕ ಪಾಡಿ ಗ್ರಾಮದ ಕೆ. ಕೆ.ಪೊನ್ನಪ್ಪ, ಸೋಬಾನೆ ಪದಕ್ಕೆ ಚಾಮರಾಜನಗರ ಜಿಲ್ಲೆ ಹಾಗೂ ತಾಲೂಕಿನ ಹೊನ್ನಮ್ಮ, ತತ್ವಪದಕ್ಕೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುತ್ತಪ್ಪ ಅಲ್ಲಪ್ಪ ಸವದಿ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮಲ್ಲೇಶಪ್ಪ ಫಕ್ಕೀರಪ್ಪ ತಡಸದ, ಡೊಳ್ಳಿನ ಹಾಡುಗಾರಿಕೆಗೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಿಡೀಡಿ ಗ್ರಾಮದ ಸುರೇಶ ರಾಮಚಂದ್ರ ಜೋಶಿ, ತತ್ವಪದ ಮತ್ತು ಭಜನೆಗೆ ಬಾಗಲಕೋಟೆ ಜಿಲ್ಲೆಯ ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ, ಲಾವಣಿ ಪದಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಇಂದೂರ ಗ್ರಾಮದ ಸಹದೇವಪ್ಪ ಈರಪ್ಪಾನಡಗೇರಾ, ತತ್ವಪದಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕ್ಯಾಲಗೊಂಡ ಗ್ರಾಮದ ಬಸವರಾಜ ತಿರುಕಪ ಶಿಗ್ಗಾಂವಿ, ಪುರವಂತಿಕೆ ಗೆ ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಸಾಕೀನಭಲೇಹೊಸೂರಿನ ಮುತ್ತಪ್ಪ ರೇವಣಪ್ಪ ರೋಣ, ಹಲಗೆ ವಾದನಕ್ಕೆ ಕಲಬುರ್ಗಿ ತಾಲೂಕು ಹಾಗೂ ಜಿಲ್ಲೆಯ ಕಪನೂರು ಗ್ರಾಮದ ಸಾಯಬಣ್ಣ, ಚಕ್ರಿ ಭಜನೆಗೆ ಬೀದರ ಜಿಲ್ಲೆಯ ಹುಲಸೂರು ತಾಲೂಕಿನ ವೈಜಿನಾಥಯ್ಯ ಸಂಗಯ್ಯ ಸ್ವಾಮಿ, ಹಗಲುವೇಷಕ್ಕೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಂಬಣ್ಣ, ಗೋಂದಳಿಗರು ಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲುಕಿನ ತಾವರಗೇರಿಯ ತಿಪ್ಪಣ್ಣ ಅಂಬಾಜಿ ಸುಗತೇಕರ, ಗೋಂದಳಿ ಪದಕ್ಕೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಗಳ್ಳಿ ತಾಲೂಕಿನ ಹಂಪಾಪಟ್ಟಣದ ಗೋಂದಳಿ ರಾಮಪ್ಪ, ಮದುವೆ ಹಾಡಿಗೆ ಯಾದಗಿರಿ ಜಿಲ್ಲೆಯ ಶಹಪೂರಾ ತಾಲೂಕಿನ ಗೋಗಿ ಬಸವ ಲಿಂಗಮ್ಮ, ಆಯ್ಕೆಯಾಗಿದ್ದಾರೆ.

ತಜ್ಞ ಪ್ರಶಸ್ತಿಯ ಡಾ. ಜೀ.ಶಂ.ಪಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಗಾಯತ್ರಿ ನಾವಡ, ಡಾ. ಗದ್ದಗೀಮಠ ಪ್ರಶಸ್ತಿಗೆ ಕಲಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಸವರಾಜು ಸಬರದ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.

Comments are closed.