ಕರಾವಳಿ

ಬಟ್ಟೆ ಮಾರಲು ಬಂದು ಅಪ್ರಾಪ್ತೆಗೆ ಕಿರುಕುಳ ಕೊಟ್ಟ ಅನ್ಯಕೋಮಿನ ವ್ಯಕ್ತಿ ಪೋಕ್ಸೋ ಕಾಯ್ದೆಯಡಿ ಬಂಧನ

Pinterest LinkedIn Tumblr

ಕುಂದಾಪುರ: ಬಟ್ಟೆ ವ್ಯಾಪಾರದ ನೆಪದಲ್ಲಿ ಬಂದು ಪರಿಶಿಷ್ಟ ಪಂಗಡದ ಅಪ್ರಾಪ್ತ ಯುವತಿಯೊಬ್ಬಳಿಗೆ ಅನ್ಯಕೋಮಿನ ವ್ಯಕ್ತಿ ಕಿರುಕುಳ ನೀಡಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಂಡ್ಲೂರು ನಿವಾಸಿ ದಸ್ತಗಿರ್ (36) ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿಯು ಬಟ್ಟೆ ಮಾರುವ ಸಲುವಾಗಿ ಆಗ್ಗಾಗೆ 17 ವರ್ಷ ಪ್ರಾಯದ ಯುವತಿ ವಾಸವಿದ್ದ ಮನೆ ಬಳಿ ಬರುತ್ತಿದ್ದ. ಈ ಹಿಂದೆಯೂ ಒಮ್ಮೆ ಆಕೆಯನ್ನು ಹಿಡಿದೆಳೆಯಲು ಯತ್ನಿಸಿದ್ದು ಆಕೆ ತಪ್ಪಿಸಿಕೊಂಡಿದ್ದಳು. ಅದ್ಯೆಗೋ ಆಕೆಯ ಮೊಬೈಲ್ ನಂಬರ್ ಪಡೆದಿದ್ದ ಆತ ಆಕೆಯನ್ನು ಪುಸಲಾಯಿಸಿ ತಾನು ಹೇಳಿದಲ್ಲಿಗೆ ಬರುವಂತೆ ತಿಳಿಸಿದ್ದ.ಈ ವಿಚಾರ ತಿಳಿದ ಮನೆಯವರು ಹಾಗೂ ಸ್ಥಳೀಯರು ಆತನನ್ನು ಹಿಡಿಯಲು ಯತ್ನಿಸಿದ್ದು ಆತ ಪರಾರಿಯಾಗಲೆತ್ನಿಸಿದ್ದ. ಆದರೆ ಶಂಕರನಾರಾಯಣ ಹಾಗೂ ಕಂಡ್ಲೂರು (ಕುಂದಾಪುರ ಗ್ರಾಮಾಂತರ ಠಾಣೆ) ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ್ ತಂಡ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳಕ್ಕೆ ಕುಂದಾಪುರ ಪ್ರಭಾರ ಡಿವೈಎಸ್ಪಿ ಭರತ್ ರೆಡ್ಡಿ ಭೇಟಿ ನೀಡಿದ್ದರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.