ಕರಾವಳಿ

ಬಿಜೆಪಿಯ ಧ್ವಜ ಸುಟ್ಟು ಹಾಕಿ ಅವಹೇಳನಕಾರಿ ಘೊಷಣೆ ಕೂಗಿದ ಆರೋಪ : ಸಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಬಂಧನಕ್ಕೆ ಆಗ್ರಹ

Pinterest LinkedIn Tumblr

ಮಂಗಳೂರು : ಸಿಎಫ್‌ಐ ಕಾರ್ಯಕರ್ತರು ಹಾಗೂ ಎಸ್‌ಡಿಪಿಐ ಸಂಘಟನೆಯ ಪರವಾಗಿ ನಗರದ ಅಂಬೇಡ್ಕರ್ ವ್ರತದ ಬಳಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿಯ ಧ್ವಜಕೆ ಬೆಂಕಿ ಕೊಟ್ಟು ಸುಟ್ಟ ಹಾಕಿದ ಹಾಗೂ ‌ಬಿಜೆಪಿ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿ ಘೊಷಣೆ ಕೂಗಿದ್ದಾರೆ ಎಂದು ಆರೋಪಿಸಿ ಹಾಗೂ ತಪ್ಪಿತಸ್ತರ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ದಕ್ಷಿಣ ಮಂಡಲ ಯುವಮೋರ್ಚ ವತಿಯಿಂದ ಮಂಗಳೂರು ನಗರ ಪೋಲಿಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಮಂಡಲ ಯುವಮೋರ್ಚ ಅಧ್ಯಕ್ಷರಾದ ಸಚಿನ್ ರಾಜ್ ರೈ, ಪ್ರಧಾನ ಕಾರ್ಯದರ್ಶಿಗಳಾದ ಸುಶಾಂತ್ ಕೋಟಿಮುರ ,ಜೀವನ್ ಉಪ ಅಧ್ಯಕ್ಷರಾದ ಪ್ರಕಾಶ್ ಗರೋಡಿ, ಘನ್ಶಮ್ ಅತ್ತಾವರ ನಿಕಿತ್ ಕೊಟಾರಿ , ಕಾರ್ಯದರ್ಶಿ ಜಯರಾಜ್ ಚರಣ್ ಗುಂಡಲಿಕೆ , ಪ್ರತಮ್ ಕಂದುಕ, ಚರಣ್ ಶೆಟ್ಟಿ, ಮೋಹಿತ್ ಮುಂತಾದವರು ನಿಯೋಗದಲ್ಲಿದ್ದರು.

Comments are closed.