ಕರಾವಳಿ

ಪೇಜಾವರ ವಿಶ್ವೇಶತೀರ್ಥರ ಸಂಸ್ಮರಣಾರ್ಥ ಶಿವಳ್ಳಿ ಸ್ಪಂದನದಿಂದ ರಕ್ತದಾನ ಶಿಬಿರ

Pinterest LinkedIn Tumblr

ಮಂಗಳೂರು : ಮಂಗಳೂರಿನ ಶಿವಳ್ಳಿ ಸ್ಪಂದನದ 12 ವಲಯಗಳ ಪದಾಧಿಕಾರಿಗಳು ಸದಸ್ಯರು ಹಾಗೂ ಮಹಿಳೆಯರು ಸೇರಿದಂತೆ 200ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ ಮಾಡಲಾಯಿತು.

ವೃಂದಾವನಸ್ಥರಾಗಿರುವ ಪೇಜಾವರ ವಿಶ್ವೇಶತೀರ್ಥರ ಸಂಸ್ಮರಣಾರ್ಥ ಈ ರಕ್ತದಾನ ಶಿಬಿರವನ್ನು ಅಶೋಕನಗರವಲಯದ ಶಿವಳ್ಳಿ ಸ್ಪಂದನ ಬಳಗವು ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಂಡಿತ್ತು.

ನಗರದ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರವನ್ನು ಸುಧಾಕರ ರಾವ್ ಪೇಜಾವರ ದೀಪ ಬೆಳಗಿ ಉದ್ಘಾಟಿಸಿದರು. ಶಿವಳ್ಳಿ ಸ್ಪಂದನ ತಾಲೂಕು ಕಾರ್ಯದರ್ಶಿ ಗಣೇಶ್ ಹೆಬ್ಬಾರ್, ಅಧ್ಯಕ್ಷ ಕೃಷ್ಣ ಭಟ್ ವಲಯಾಧ್ಯಕ್ಷ ಎಂ ನಾರಾಯಣ ಭಟ್, ರೆಡ್‌ಕ್ರಾಸ್ ಸಂಸ್ಥೆಯ ಪ್ರವೀಣ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಹಿರಿಯ ವೈದ್ಯ ಡಾ. ಪ್ರಭಾಕರ ರಾವ್ ಅವರನ್ನು ಸನ್ಮಾನಿಸಲಾಯ್ತು. ಶಿವಳ್ಳಿ ಸ್ಪಂದನ ಅಶೋಕ ನಗರ ವಲಯದ ಅಧ್ಯಕ್ಷ ಎಂ. ನಾರಾಯಣ ಭಟ್ ಸ್ವಾಗತಿಸಿದರು. ತಾಲೂಕು ಕಾರ್ಯದರ್ಶಿ ಗಣೇಶ ಹೆಬ್ಬಾರ್ ಪ್ರಸ್ತಾವನೆಗೈದರು. ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ವಂದಿಸಿದರು. ಒಟ್ಟು ಕಾರ್ಯಕ್ರಮದ ಯಶಸ್ಸಿನ ರೂವಾರಿ ವಲಯ ಕಾರ್ಯದರ್ಶಿ ಪ್ರಶಾಂತ ಉಪಾಧ್ಯಾಯ ನಿರೂಪಿಸಿದರು.

Comments are closed.