ಕರಾವಳಿ

ಪ್ರತಿಯೊಂದು ವಾರ್ಡ್ ಗಳನ್ನೂ ಅಭಿವೃದ್ಧಿಯೆಡೆಗೆ ಸಾಗಿಸುವ ಕನಸಿದೆ : ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್ ಗಳನ್ನೂ ಅಭಿವೃದ್ಧಿಯೆಡೆಗೆ ಸಾಗಿಸುವ ಕನಸಿದೆ. ವಾರ್ಡ್`ಗಳು ಕ್ಷೇತ್ರದ ಅಭಿವೃದ್ಧಿಯನ್ನು ಅಳೆಯುವ ಅಳತೆಗೋಲು ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಬೋಳೂರು ವಾರ್ಡಿನ ಉರ್ವ ಕೊರಗಜ್ಜ ಕ್ಷೇತ್ರದ ಪರಿಸರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಂಗಳೂರು ನಗರ ದಕ್ಷಿಣ ವಿಧಾನಸಭೆಯ ಪ್ರತಿಯೊಂದು ವಾರ್ಡ್ ಗಳನ್ನೂ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತೇನೆ. ಮೂಲಭೂತ ಸೌಕರ್ಯಗಳನ್ನೊಳಗೊಂಡು ಪ್ರವಾಸೋದ್ಯಮ ಸೇರಿದಂತೆ ಮಾದರಿ ಕ್ಷೇತ್ರವನ್ನಾಗುವ ಗುರಿಯಿದೆ ಎಂದರು.

ಬೋಳೂರು ವಾರ್ಡಿನ ಉರ್ವ ಕೊರಗಜ್ಜ ಕ್ಷೇತ್ರದ ಹೊರ ಅಂಗಣದ ಕಾಂಕ್ರೀಟೀಕರಣ ಹಾಗೂ ಇನ್ನಿತರ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಎಲ್ಲಾ ವಾರ್ಡ್ ಗಳಿಗೂ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅದ್ಯಕ್ಷರು ಹಾಗೂ ಸ್ಥಳಿಯ ಮನಪಾ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು, ಕೊರಗಜ್ಜ ಕ್ಷೇತ್ರದ ಪ್ರಮುಖರಾದ ರಾಜೇಶ್ ಉರ್ವ, ಬಿಜೆಪಿ ಮುಖಂಡರಾದ ರಾಹುಲ್ ಶೆಟ್ಟಿ ಬೋಳೂರು, ಕಾರ್ತಿಕ್ ಬಂಗೇರ, ದಾಮೋದರ ಚೆಟ್ಟಿಯಾರ್, ವಸಂತ್ ಜೆ ಪೂಜಾರಿ, ಸಂದೀಪ್, ದಿನೇಶ್ ಕರ್ಕೇರ, ಪದ್ಮನಾಭ ಪುತ್ರನ್, ರಮೇಶ್ ಸುವರ್ಣ, ಭವಾನಿ ಶಂಕರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.