ಕರಾವಳಿ

ವಿವಿಧ ಸಂಘಟನೆಗಳ ನಾಯಕಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಹರಿಣಿ ವಿಜೇಂದ್ರ ವಿಧಿವಶ

Pinterest LinkedIn Tumblr

ಮಂಗಳೂರು, ನವೆಂಬರ್.27 : ನಗರದ ಚಿಲಿಂಬಿ ನಿವಾಸಿ ಶ್ರೀಮತಿ ಹರಿಣಿ ವಿಜೇಂದ್ರ (43.) ಇವರು ಅಸೌಖ್ಯದಿಂದಾಗಿ ನ.26ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಶಾರದಾ ಮಹಿಳಾ ಮಂಡಲ (ರಿ.), ಶಾರದಾ ನಿಕೇತನ, ಚಿಲಿಂಬಿ ಇದರ ಅಧ್ಯಕ್ಷರೂ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿ, ನೆಹರೂ ಮೈದಾನದ ಹಿಂದೂ ಯುವಸೇನೆಯ ಗಣೇಶೋತ್ಸವದ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ, ನಗರದ ಕ್ರೀಡಾಭಾರತಿಯ ಮಹಿಳಾ ಸಹಪ್ರಮುಖ್ ಆಗಿ ವೀರರಾಣಿ ಅಬ್ಬಕ್ಕ ಉತ್ಸವ, ಉಳ್ಳಾಲ ಸಮಿತಿಯ ಸದಸ್ಯರು, ಅಖಿಲ ಭಾರತ ತುಳು ಒಕ್ಕೂಟದ ಸಕ್ರಿಯ ಸದಸ್ಯೆಯಾಗಿ, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಾಜಿ ಕಾರ್ಯದರ್ಶಿಯಾಗಿ, ಭಂಡಾರಿ ಸ್ವಯಂಸೇವಕ ಸಂಘದ ಮಾಜಿ ಅಧ್ಯಕ್ಷೆಯಾಗಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದರು.

ಇವರು ಪತಿ ಹಾಗೂ ಓರ್ವ ಪುತ್ರನನ್ನು ಅಗಲಿರುವರು.

Comments are closed.