ಕರಾವಳಿ

ನಗರದ ವಿವಿಧೆಡೆಗಳಲ್ಲಿ ಅಭಿವೃದ್ಧಿಕಾರ್ಯಗಳಿಗೆ ಚಾಲನೆ : ಶಾಸಕರಿಂದ ಶಂಕುಸ್ಥಾಪನೆ – ಉದ್ಘಾಟನೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಹಾಗೂ ಪಾಲಿಕೆಯ ಜಪ್ಪಿನಮೊಗರು ವಾರ್ಡಿನಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ವೇದವ್ಯಾಸ್ ಕಾಮತ್ ನೆರವೇರಿಸಿದರು.

ಜಪ್ಪಿನಮೊಗರು ವಾರ್ಡಿನಲ್ಲಿ ಗುದ್ದಲಿಪೂಜೆ – ಉದ್ಘಾಟನೆ

ಮಂಗಳೂರು ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅದ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆಯವರು ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು ಜಪ್ಪಿನಮೊಗರು ವಾರ್ಡಿನ ಅಭಿವೃದ್ಧಿಗೆ ಶಾಸಕನಾಗಿ ನಾನು ಬದ್ಧನಾಗಿದ್ದೇನೆ. ವಿವಿಧ ಇಲಾಖೆಗಳ ಅನುದಾನ ಜೋಡಿಸಿ ತುರ್ತು ಆಗಬೇಕಿರುವ ಕಾಮಗಾರಿಗಳಿಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಸಹಕಾರ ನೀಡಬೇಕೆಂದು ಅದ್ಯಕ್ಷರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಮೇಯರ್ ವೇದವತಿ, ಕಾರ್ಪೊರೇಟರ್ ವೀಣಾ ಮಂಗಳ, ಬಿಜೆಪಿ ಮುಖಂಡರಾದ ಜಿ. ಸುರೇಂದ್ರ, ಕಿರಣ್ ರೈ, ಸುಜಾತ, ಸವಿತಾ ಶೆಟ್ಟಿ, ಸಂದೇಶ್ ಶೆಟ್ಟಿ, ದೀಪಕ್,ಸುಕೇಶ್ ಭರತ್ ರಾಜ್ ಶೆಟ್ಟಿ ಪ್ರವೀಣ್ ಕುಮಾರ್ ಸುಪ್ರೀಂ ಡಿಸೋಜಾ ಹರೀಶ್ ಬೆನಕ ಶ್ರೀಧರ್ ಶೆಟ್ಟಿ ಸಚಿನ್ ರೈ ಪವನ್ ರಾಜ್ ಶೆಟ್ಟಿ ಸಂತೋಷ್ , ಉದಯ್,ರಾಮ್ ಪ್ರಸಾದ್, ಸ್ಥಳೀಯರಾದ ವಿನ್ಸೆಂಟ್ ಡಿಸೋಜಾ ನಾಗೇಂದ್ರ ಗಣೇಶ್ ಶೆಟ್ಟಿ ಸತೀಶ್ ಅಡಪ ಲೋಹಿತ್ ಶೆಟ್ಟಿ,ಅಧಿಕಾರಿ ವರ್ಗದವರು ಹಾಗೂ ಬಿಜೆಪಿ ಬೂತಿನ ಅಧ್ಯಕ್ಷ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಎಂ.ಎಫ್ ಡೈರಿ ಬಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ :

ಮಂಗಳೂರು ಮಹಾನಗರ ಪಾಲಿಕೆಯ ಪದವು ಪೂರ್ವ ವಾರ್ಡಿನ ಕುಲಶೇಖರ ಮಂಗಳೂರು ಕೆ.ಎಂ.ಎಫ್ ಡೈರಿ ಬಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯ ಭಾಸ್ಕರ್ ಮೊಯ್ಲಿ,ಬಿಜೆಪಿ ಮುಖಂಡರಾದ ಅಜಯ್, ಸುಜನ್ ದಾಸ್, ಅನಿಲ್ ರಾವ್, ಮಂಜುಳಾ ರಾವ್, ಹರಿಣಿ ಪ್ರೇಮ್, ಲೋಕೇಶ್ ಚೌಕಿ, ಯೋಗೀಶ್ ಚೌಕಿ, ಸತೀಶ್ ಬೈತುರ್ಲಿ, ನಾಗೇಶ್ ಚೌಕಿ, ವಸಂತಿ ಆಚಾರ್ಯ , ಪ್ರಸನ್ನ ಆಚಾರ್ಯ, ದಿನೇಶ್ ಪಂಜಿರೆಲ್, ರಾಕೇಶ್ ಕುಡುಪು ಕಟ್ಟೆ, ರಾಜೇಂದ್ರ ಬೈತುರ್ಲಿ, ವಿನೋದ್ ಮಂಗಳ ನಗರ, ಇಂದುಮತಿ, ದಿನೇಶ್ ಸಿಲ್ವರ್ ಗೇಟ್, ದೇವದಾಸ್, ಸತೀಶ್ ಕುಡುಪು, ಭರತ್ ಮುಂತಾದವರು ಉಪಸ್ಥಿತರಿದ್ದರು.

Comments are closed.