ಕರಾವಳಿ

“ಮನಸ್ಸು ಮತ್ತು ದೇಹದ ಸಮತೋಲನ”ಕ್ಕಾಗಿ ಥೆರಪ್ಯುಟಿಕ್ ಕ್ರಿಯೇಟಿವ್ ಮೂವ್ಮೆಂಟ್ ಕಾರ್ಯಗಾರ ಸರಣಿ ಆರಂಭ 

Pinterest LinkedIn Tumblr

ಮಂಗಳೂರು, ಆಕ್ಟೋಬರ್.13: ಅನ್ವೇಶನಮ್ – ಮೈಂಡ್‌ಫುಲ್‌ನೆಸ್ ಮತ್ತು ಇಮೋಷನಲ್ ವೆಲ್ಬೆಯಿಂಗ್ ಕೇಂದ್ರವು “ಬಿಕ್ಕಟ್ಟಿನ ಸಮಯದಲ್ಲಿ ಮನಸ್ಸು ಮತ್ತು ದೇಹದ ಸಮತೋಲನ” ಎಂಬ ಚಿಕಿತ್ಸಾತ್ಮಕ ಸೃಜನಶೀಲ ಚಲನವಲನ ಕಾರ್ಯಾಗಾರ ಸರಣಿ (Therapeutic Creative Movement Workshop series)ಗೆ ನಿವೃತ್ತ ಎಡಿಎಂ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಅವರು ಚಾಲನೆ ನೀಡಿದರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ದಿನವಾದ ಅಕ್ಟೋಬರ್ 10ರಂದು ನಗರದ ಗುಜರಾತಿ ಶಾಲೆಯಲ್ಲಿ ಸರಣಿ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು.

ಪ್ರತಿಯೊಬ್ಬರಲ್ಲೂ ಮಾನಸಿಕ ಆರೋಗ್ಯದ ಅರಿವು ಇರಬೇಕು, ಅದರಲ್ಲೂ ಮಹಿಳೆಯರಲ್ಲಿ, ಶಿಕ್ಷಕರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ತಿಳುವಳಿಕೆ ಹೆಚ್ಚಿರಬೇಕಾಗಿದ್ದು, ಇದರಿಂದ ಕೌಟುಂಬಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ಉತ್ತಮಗೊಳ್ಳುವುದು ಎಂದು ಪ್ರಭಾಕರ ಶರ್ಮಾ ಅಭಿಪ್ರಾಯಪಟ್ಟರು.

ಸಾಂಕ್ರಮಿಕ ಕಾಲದಲ್ಲಿ ಆರೋಗ್ಯ ಮತ್ತು ಇನ್ನಿತರ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರಿಗಾಗಿ ಮಾನಸಿಕ ಆರೋಗ್ಯ ಕಾರ್ಯಗಾರ ನಡೆಸಲಾಗುತಿದ್ದು, ಗುಜರಾತ್ ಸ್ಕೂಲ್ ಮತ್ತು ಚಿನ್ಮಯ ಸ್ಕೂಲ್ ಶಿಕ್ಷಕರ ತಂಡಕ್ಕೆ ಮೊದಲ ಕಾರ್ಯಾಗಾರ ನಡೆಸಲಾಯಿತು. ಅನ್ವೇಷಣಮ್ ನಿರ್ದೇಶಕಿ ಸಚಿತಾ ನಂದಗೋಪಾಲ್ ಅವರು ಕಾರ್ಯಗಾರ ನಡೆಸಿಕೊಟ್ಟರು.

ಗುಜರಾತಿ ಸ್ಕೂಲ್ ಸಹಯೋಗದೊಂದಿಗೆ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದ್ದು, ಅದೇ ದಿನ ಸಂಜೆ ಅನಿರ್ವೇದ ಮಾನಸಿಕ ಸ್ವಾಸ್ಥ್ಯ ಕೇಂದ್ರದಲ್ಲಿ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದರು.

ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಆರೋಗ್ಯ ಮತ್ತು ಇನ್ನಿತರ ಕ್ಷೇತ್ರದಲ್ಲಿ ದುಡಿಯುತ್ತಿರುವ ವೃತ್ತಿಪರರಿಗೆ ಮಾನಸಿಕ ಶಕ್ತಿ ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಈ ಕಾರ್ಯಗಾರಗಳನ್ನು ನಡೆಸಲಾಗುತ್ತಿದೆ.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರನಾಥ್ ಉಚ್ಚಿಲ್, ಗುಜರಾತಿ ಶಾಲೆಯ ಶಿಕ್ಷಕಿ ಸೌಮ್ಯ ಶೆಟ್ಟಿ, ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್ ಸಂಚಾಲಕ ಶ್ರೀನಿವಾಸನ್ ನಂದಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ಅದೇ ದಿನ ಸಂಜೆ ಅನಿರ್ವೇದ ಮಾನಸಿಕ ಸ್ವಾಸ್ಥ್ಯ ಕೇಂದ್ರದಲ್ಲಿ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರಿಗಾಗಿ ಕಾರ್ಯಾಗಾರ ನಡೆಯಿತು.

ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಆರೋಗ್ಯ ಮತ್ತು ಇನ್ನಿತರ ಕ್ಷೇತ್ರದಲ್ಲಿ ದುಡಿಯುತ್ತಿರುವ ವೃತ್ತಿಪರರಿಗೆ ಮಾನಸಿಕ ಶಕ್ತಿ ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಈ ಕಾರ್ಯಗಾರಗಳನ್ನು ನಡೆಸಲಾಗುತ್ತಿದೆ.

 

Comments are closed.