ಕರಾವಳಿ

ಅಕ್ರಮ ಬಾಕ್ಸೈಟ್ ಸಾಗಾಟಕ್ಕೆ ಬ್ರೇಕ್ ಹಾಕಿದ ಬೈಂದೂರು ಪಿಎಸ್ಐ..!

Pinterest LinkedIn Tumblr

ಕುಂದಾಪುರ: ಬೈಂದೂರು ಶಿರೂರು ಸಮೀಪದ ಒತ್ತಿನೆಣೆಯ ಸೆಳ್ಳೆಕುಳ್ಳಿ ಎಂಬಲ್ಲಿ ಇರುವ ಶಿರೂರು ಜಿಲ್ಲಾಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಎನ್ನುವರಿಗೆ ಸೇರಿದ ಜಾಗದಿಂದ ಬಾಕ್ಸೈಟ್ ಅದಿರು ಮಿಶ್ರಿತ ಮಣ್ಣು ಅಗೆದು ಶ್ರೀಕಾಂತ್ ಶೆಟ್ಟಿ ಎನ್ನುವರು ನೆರೆಯ ಆಂದ್ರಪ್ರದೇಶ, ತಮಿಳುನಾಡು ರಾಜ್ಯಕ್ಕೆ ಅಕ್ರಮ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಬೈಂದೂರು ಪಿಎಸ್‌ಐ ಸಂಗೀತಾ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳ ತಂಡ ದಾಳಿ ನಡೆಸಿ ಎರಡು ಬೃಹತ್ ಲಾರಿ, ಒಂದು ಹಿಟಾಚಿ ಯಂತ್ರ ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ.

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿತ್ತು ಎನ್ನಲಾದ ಅಕ್ರಮ‌ ಕೆಲಸ ಇದಾಗಿದ್ದು ಗಣಿ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೇ ಸಾಗಾಟ ಮಾಡುತ್ತಿದ್ದ ಆರೋಪ ಕೇಳಿಬಂದಿದೆ.ಸರಕಾರಕ್ಕೆ ರಾಜಧನ ವಂಚಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಬಾಕ್ಸೈಟ್‌ ಅಕ್ರಮ ಸಾಗಾಟ ಮಾಡಲಾಗಿದೆ ಎನ್ನಲಾಗುತ್ತಿದ್ದು ಮಣ್ಣು ತುಂಬಿದ ಹಿಟಾಚಿ ಹಾಗೂ ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು ಇವುಗಳನ್ನು ಗಣಿ‌ಇಲಾಖೆಗೆ ಹಸ್ತಾಂತರ ಮಾಡಲಿದ್ದಾರೆ.

ಇದೊಂದು ಕೋಟ್ಯಾಂತರ ರೂಪಾಯಿ ಹಗರಣ ಎನ್ನಲಾಗುತ್ತಿದ್ದು ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಗಳು ಕೇಳಿಬರುತ್ತಿದೆ. ಸದ್ಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಕರ್ತವ್ಯವವನ್ನು ದಕ್ಷವಾಗಿ ನಿರ್ವಹಿಸಿದ್ದು ಮುಂದಿನ ದಿನಗಳಲ್ಲಿ ಈ ಅಕ್ರಮದ ಪ್ರಕರಣವನ್ನು ಗಣಿ ಇಲಾಖೆ ಯಾವ ಮಟ್ಟಿಗೆ ಮಟ್ಟಹಾಕಲಿದೆ ಮತ್ತು ತಪ್ಪಿತಸ್ಥರ ವಿರುದ್ಧ ಯಾವ ರೀತಿಯಾದ ಕ್ರಮ ಕ್ರಮಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.