ಕರಾವಳಿ

ಖಾದರ್ ಶಾ ವರ್ಗಾವಣೆ: ದ.ಕ.ಜಿಲ್ಲಾ ವಾರ್ತಾ ಇಲಾಖೆಯ ನಿರ್ದೇಶಕರಾಗಿ (ಪ್ರಭಾರ) ಬಿ. ಮಂಜುನಾಥ್ ಅಧಿಕಾರ ಸ್ವೀಕಾರ

Pinterest LinkedIn Tumblr

ಮಂಗಳೂರು ಸೆಪ್ಟೆಂಬರ್ 22 : ದಕ್ಷಿಣ ಕನ್ನಡ ಜಿಲ್ಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಉಡುಪಿ ಜಿಲ್ಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ಮಂಜುನಾಥ್ ಅವರು ವಹಿಸಿಕೊಂಡಿರುತ್ತಾರೆ.

ದ.ಕ.ಜಿಲ್ಲೆಯ ಹಿರಿಯ ವಾರ್ತಾಧಿಕಾರಿ ಅದ ಬಿ.ಎ.ಖಾದರ್ ಶಾ ಅವರು ದ.ಕ ಜಿಲ್ಲಾ ಅಲ್ಪಸಂಖ್ಯಾತ ರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, ತೆರವಾದ ಅವರ ಸ್ಥಾನಕ್ಕೆ ಉಡುಪಿ ಜಿಲ್ಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ಮಂಜುನಾಥ್ ಅವರನ್ನು (ಪ್ರಭಾರ) ನೇಮಕಗೊಳಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಿರುವ ಬಿ. ಮಂಜುನಾಥ್ ಅವರಿಗೆ ಬಿ.ಎ.ಖಾದರ್ ಶಾ ಅವರು ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಖಾದರ್ ಶಾ ಅವರನ್ನು ಇಲಾಖೆಯ ಸಿಬ್ಬಂದಿಗಳ ಪರವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಖಾದರ್ ಶಾ ಅವರು ದಕ್ಷಿಣ ಕನ್ನಡ ಜಿಲ್ಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರ ವಹಿಸಿಕೊಂಡ ಬಳಿಕ ಪತ್ರಕರ್ತರ ಜೊತೆ ಬಹಳ ಅನ್ಯೊನ್ಯವಾಗಿದ್ದರು. ಮಾತ್ರವಲ್ಲದೇ ಪತ್ರಕರ್ತರಿಗಾಗಿಯೇ ವಾಟ್ಸ್ ಆಪ್ ಗ್ರೂಪ್ ರಚಿಸಿ ಪತ್ರಕರ್ತರಿಗೆ ತ್ವರಿತ ಮಾಹಿತಿಗಳನ್ನು ರವಾನಿಸುತ್ತಿದ್ದರು.

ಬಿ.ಎ.ಖಾದರ್ ಶಾ ಅವರು ದ.ಕ ಜಿಲ್ಲಾ ಅಲ್ಪಸಂಖ್ಯಾತ ರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ

ಇಷ್ಟು ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಯಾವೂದೇ ರೀತಿಯ ದರ್ಪ ತೋರದೇ ಎಲ್ಲರ ಜೊತೆ ಆತ್ಮೀಯರಾಗಿದ್ದರು. ಪತ್ರಕರ್ತರೊಂದಿಗಿನ ಅವರ ಒಡನಾಟ, ಪರಿಶ್ರಮ,ಪ್ರೀತಿ ಸದಾ ನಿರಂತರವಾಗಿರಲಿ ಎಂದು ಪತ್ರಕರತರ ಬಳಗ ಅವರಿಗೆ ಶುಭಾ ಹಾರೈಸಿದೆ.

Comments are closed.