ಕರಾವಳಿ

ನಲ್ಯಗುತ್ತು ಗುತ್ತಿನಾರು ಬೋಜ ಶೆಟ್ಟಿ (ಕುಡುಂಬೂರು) ವಿಧಿವಶ

Pinterest LinkedIn Tumblr

ಮಂಗಳೂರು : ಪಂಜ ನಲ್ಯಗುತ್ತು ಗುತ್ತಿನಾರು ಬೋಜ ಶೆಟ್ಟಿ (ಕುಡುಂಬೂರು) (92) ಅವರು ಅ, 13ರಂದು ದೈವಾಧೀನಾರಾಗಿರುವರು.

ಮೃತರ ಮಕ್ಕಳಾದ ಮುಂಬಯಿಯ ಹೋಟೇಲು ಉದ್ಯಮಿ ದಿವಾಕರ ಶೆಟ್ಟಿ ಕುರ್ಲಾ ಮತ್ತು ಕರುಣಾಕರ್ ಶೆಟ್ಟಿ . ಮಗಳು ಯಶೋಧ ಶೆಟ್ಟಿ . ಅಳಿಯ ಬಂಟರ ಸಂಘ ಮುಂಬಯಿಯ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಲ್ಯಗುತ್ತು ಪ್ರಕಾಶ್ ಶೆಟ್ಟಿ. ಸೊಸೆ ಬೇಬಿ ಪದ್ಮನಾಬ್ ಶೆಟ್ಟಿ ಬೋರಿವಲಿ ಹಾಗೂ ನಲ್ಯಗುತ್ತು ಕುಟುಂಬಸ್ಥರು. ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಬೋಜ ಶೆಟ್ಟಿಯವರು ಹರಿಪಾದೆ ಜಾರಂತಾಯ ದೈವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರರಾಗಿ ಸೇವೆ ಸಲ್ಲಿಸಿರುವರು.

ಇವರ ನಿಧನಕ್ಕೆ ಹರಿಪಾದೆ ಜಾರಂತಾಯ ದೈವಸ್ಥಾನದ ಸರ್ವ ಸದಸ್ಯರು . ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಒಡಿಯೂರು ಗುರುದೇವಾ ಸೇವಾ ಬಳಗ ಮಹಾರಾಷ್ಟ್ರದ ಅಧ್ಯಕ್ಷ ನ್ಯಾ. ಕೃಷ್ಣ ಶೆಟ್ಟಿ, ಮಾಜಿ ಅಧ್ಯಕ್ಷ ಕಡಂದಲೆ ಪರಾರಿ ನ್ಯಾ. ಪ್ರಕಾಶ್ ಶೆಟ್ಟಿ ಮತ್ತು ಸರ್ವಸದಸ್ಯರು, ಮುಂಬಯಿ ಬಂಟರ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಸದಸ್ಯರು ಸಂತಾಪ ಸೂಚಿಸಿದ್ದಾರೆ.

_ದಿನೇಶ್ ಕುಲಾಲ್, ಮುಂಬಾಯಿ.

Comments are closed.