ಮಂಗಳೂರು : ಕಳೆದ ಕೆಲ ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಸರ್ಕ್ಯೂಟ್ ಹೌಸ್ – ಬಿಜೈ ಮಾರ್ಗ ಮಧ್ಯೆ ಇರುವ ಮ್ಯಾನ್ ಹೋಲ್ ನಿಂದ ಕೊಳಚೆ ನೀರು ಉಕ್ಕಿ ರಸ್ತೆಯ ತುಂಬೆಲ್ಲ ಹರಿದಾಡುತ್ತಿತ್ತು. ಈ ಸಮಸ್ಯೆ ಬಗೆಹರಿಸಲು ಮ್ಯಾನ್ ಹೋಲ್ ನಿಂದ ಹರಿಯುವ ನೀರಿಗೆ ಪ್ರತ್ಯೇಕ ವ್ಯವಸ್ತೆ ಮಾಡಬೇಕಿತ್ತು. ಅದರಂತೆ ಸದ್ಯ ಕದ್ರಿ ಕಂಬಳದ ಒಳಚರಂಡಿ ವ್ಯವಸ್ಥೆಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಾರಂಭಿಸಲಾಗಿದೆ.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮೇಯರ್ ದಿವಾಕರ್ ಪಾಂಡೇಶ್ವರ ಹಾಗೂ ಪಾಲಿಕೆ ಸದಸ್ಯರಾದ ಶಕಿಲಾ ಕಾವಾ, ಸುಧೀರ್ ಶೆಟ್ಟಿ ಕಣ್ಣೂರು, ಕದ್ರಿ ಮನೋಹರ್ ಶೆಟ್ಟಿ, ಸ್ಥಾಯಿ ಸಮಿತಿ ಅದ್ಯಕ್ಷರಾದ ಜಗದೀಶ್ ಶೆಟ್ಟಿ ಬೋಳೂರು, ಕಿರಣ್ ಕುಮಾರ್ ಸ್ಥಳೀಯ ಮುಖಂಡರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದರು.
Comments are closed.