ಕರಾವಳಿ

ದ.ಕ.ಜಿಲ್ಲೆಯಲ್ಲಿ ಶನಿವಾರ 8 ಮಂದಿ ಕೊರೋನಾಗೆ ಬಲಿ : ಸೋಂಕಿನಿಂದ ಮೃತರಾದವರ ಸಂಖ್ಯೆ 115ಕ್ಕೆ ಏರಿಕೆ

Pinterest LinkedIn Tumblr

ಮಂಗಳೂರು, ಜುಲೈ.26 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ‌ ಕೊರೋನಾ ಸೋಂಕಿಗೆ ಬರೋಬ್ಬರಿ‌ 8 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.

ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಸಾವು ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಜುಲೈ 24ರಂದು ನಿಧನರಾದ ಕಾಸರಗೋಡು ಮಂಜೇಶ್ವರ ನಿವಾಸಿ ಸೇರಿದಂತೆ ಮೂವರಿಗೂ ಕೂಡಾ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಮತ್ತೆ 8 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಈವರೆಗೆ 115 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಶನಿವಾರ ಮೃತಪಟ್ಟವರ ಪೈಕಿ ಏಳು ಮಂದಿ ಮಂಗಳೂರು ತಾಲೂಕಿನವರಾದರೆ, ಓರ್ವ ಕೇರಳದ ಕಾಸರಗೋಡು ಮೂಲದವರು. ಮೃತರೆಲ್ಲ ಹಿರಿಯ ನಾಗರಿಕರೇ ಆಗಿದ್ದಾರೆ. ಏಳು ಮಂದಿ ಮಂಗಳೂರು ನಿವಾಸಿಗಳಾಗಿದ್ದರೆ, ಒಬ್ಬರು ಕೇರಳದ ಮಂಜೇಶ್ವರದವರು.

53 ವರ್ಷಕ್ಕಿಂತ ಮೇಲ್ಪಟ್ಟವರೇ ಮೃತಪಟ್ಟಿದ್ದಾರೆ. ಇವರಲ್ಲಿ ಆರು ಮಂದಿ ಪುರುಷರಿದ್ದರೆ, ಇಬ್ಬರು ಮಹಿಳೆಯರಿದ್ದಾರೆ. ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲೇ ಸಾವಿಗೀಡಾಗಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಜಿಲ್ಲಾಡಳಿತ ಸರ್ವ ಕ್ರಮ ಕೈಗೊಂಡಿದೆ.

ಮಂಗಳೂರಿನ 88 ವರ್ಷದ ವೃದ್ಧ ಶ್ವಾಸಕೋಶ ಸಮಸ್ಯೆ, ತೀವ್ರ ಉಸಿರಾಟ ತೊಂದರೆ, ಮೂತ್ರಪಿಂಡ ವೈಫಲ್ಯ, 78 ವರ್ಷದ ವೃದ್ಧ ಬ್ಯಾಕ್ಟೀರಿಯ ಸೋಂಕು, ಶ್ವಾಸಕೋಶ ಸಮಸ್ಯೆ, ತೀವ್ರ ಉಸಿರಾಟ ತೊಂದರೆ, 67 ವರ್ಷದ ವೃದ್ಧ ‘ಸೆಪ್ಸಿಸ್ ವಿತ್ ಸೆಪ್ಟಿಕ್ ಶಾಕ್’, 68 ವರ್ಷದ ವೃದ್ಧ ಸೆಪ್ಟಿಕ್ ಶಾಕ್, 75 ವರ್ಷದ ವೃದ್ಧ ಶ್ವಾಸಕೋಶ ಸಮಸ್ಯೆ, ತೀವ್ರ ಉಸಿರಾಟ ತೊಂದರೆ, 68 ವರ್ಷದ ವೃದ್ಧ ತೀವ್ರ ಉಸಿರಾಟ ತೊಂದರೆ, ತೀವ್ರ ಪರಿಧಮನಿ ಸಮಸ್ಯೆಯಿಂದ (Acute Coronary event) ಬಳಲುತ್ತಿದ್ದರು.

ನಗರದ 76 ವರ್ಷದ ವೃದ್ಧೆಯು ನ್ಯುಮೋನಿಯ, ಅಧಿಕ ರಕ್ತದೊತ್ತಡ, ಶ್ವಾಸಕೋಶ ಸಮಸ್ಯೆ, ತೀವ್ರ ಉಸಿರಾಟ ತೊಂದರೆ, ದೀರ್ಘಕಾಲದ ಮಧುಮೇಹ, ಕೇರಳದ ಕಾಸರಗೋಡು ತಾಲೂಕಿನ ಮಂಜೇಶ್ವರ ನಿವಾಸಿ 53 ವರ್ಷ ಮಹಿಳೆಯು ಸೆಪ್ಸಿಸ್ ಜೊತೆಗೆ ಬಹು ಅಂಗಾಂಗ ವೈಫಲ್ಯ, ಹೃದಯಾಘಾತ, ಅಧಿಕ ರಕ್ತದೊತ್ತಡ, ಎರಡನೇ ಬಗೆಯ ದೀರ್ಘಕಾಲದ ಮಧುಮೇಹ, ಬಾಹ್ಯ ನಾಳೀಯ ಕಾಯಿಲೆ (Peripheral vascular disease) ಯಿಂದ ಬಳಲುತ್ತಿದ್ದರು. ಮೃತಪಟ್ಟವರಿಗೆಲ್ಲ ಕೊರೋನ ಸೋಂಕು ತಗುಲಿತ್ತು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಶನಿವಾರದ ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ‌ ಹೆಚ್ಚುತ್ತಿರುವ ಕೊರೋನಾ ಸಾವು

ನಿನ್ನೆ ಒಂದೇ ದಿನ ಬರೋಬ್ಬರಿ 8 ಮಂದಿ ಕೊರೋನಾ ಮಹಾಮಾರಿಗೆ ಬಲಿ

ಮಂಗಳೂರಿನ 6 ಗಂಡಸರು,ಓರ್ವ ಮಹಿಳೆ,ಮಂಜೇಶ್ವರದ ಓರ್ವ ಮಹಿಳೆ ಸೇರಿ ಎಂಟು ಮಂದಿ ಸಾವು

ಮಂಗಳೂರು ನಿವಾಸಿಗಳಾದ 67,68,69,75,78 ಹಾಗೂ 88 ವರ್ಷದ ಗಂಡಸರು,76 ವರ್ಷದ ಓರ್ವ ವೃದ್ಧ ಮಹಿಳೆ ಸಾವು

ಕಾಸರಗೋಡಿನ‌ ಮಂಜೇಶ್ವರ ನಿವಾಸಿ 53 ವರ್ಷದ ‌ಮಹಿಳೆ ಕೊರೋನಾಗೆ ಬಲಿ

ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 115 ಕ್ಕೆ ಏರಿಕೆ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಾವಿನ‌ ಸಂಖ್ಯೆ

Comments are closed.