ಉಡುಪಿ: ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಅನೈಸರ್ಗಿಕ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪಿಯನ್ನು ಡಿವೈಎಸ್ಪಿ ಭರತ್ ರೆಡ್ಡಿ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಮತ್ತು ಉಪ ನಿರೀಕ್ಷಕ ನಾಸಿರ್ ಹುಸೈನ್ ಮತ್ತು ದಿಲೀಪ್ ಉಪನಿರೀಕ್ಷಕರು ಕ್ರೈಂ ತಂಡ ಬಂಧಿಸಿದೆ.
ಸಚ್ಚರಿಪೇಟೆಯ ಆರೋಪಿ ಇಬ್ರಾಹಿಂ ಎಂಬಾತನನ್ನು ಬಂಧಿತ ಆರೋಪಿ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿರುದರಿಂದ ಪ್ರಕರಣ ಬೆಳಕಿಗೆ ಬಂದು ಸಂತ್ರಸ್ತ ಬಾಲಕನು ಪೋಷಕರೊಂದಿಗೆ ದೂರು ನೀಡಿದ್ದ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಆಪ್ತಸಮಾಲೋಚನೆ ನಡೆಸಿ ಬಾಲಕನಿಗೆ ಮತ್ತು ಪೋಷಕರಿಗೆ ಆತ್ಮ ಸ್ಟೈರ್ಯ ನೀಡುವ ಮೂಲಕ ಶಿಕ್ಷಣ ಮುಂದುವರಿಸುವಂತೆ ಸಲಹೆ ನೀಡಿದರು.
ಸದ್ಯ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದು ತನಿಖೆ ನಡೆಯುತ್ತಿದೆ.
Comments are closed.