(ಸಾಂದರ್ಭಿಕ ಚಿತ್ರ)
ಮಂಗಳೂರು, ಮೇ 28 : ಕ್ವಾರಂಟೈನ್ನಲ್ಲಿದ್ದ ಗರ್ಭಿಣಿಗೆ ಮಹಿಳೆಗೆ ಸೂಕ್ತ ಚಿಕಿತ್ಸೆ ಲಭಿಸದೆ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ದುಬೈನಿಂದ ಪತಿಯೊಂದಿಗಿದ್ದ ಮಹಿಳೆ ಮಂಗಳೂರಿಗೆ ಬಂದ್ದು ಕ್ವಾರಂಟೈನ್ನಲ್ಲಿದ್ದು ಗರ್ಭಿಣಿಯಾದ ಆಕೆಗೆ ಸೂಕ್ತವಾದ ಚಿಕಿತ್ಸೆ ಲಭಿಸದ ಕಾರಣ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.
ಈ ಮಹಿಳೆ ತನ್ನ ಹೆರಿಗೆಗಾಗಿ ಮಂಗಳೂರಿಗೆ ದುಬೈನಿಂದ ವಾಪಾಸ್ ಆಗಬೇಕಿತ್ತು. ಅರ್ಜಿ ಸಲ್ಲಿಸಿದ ಬಳಿಕ ಪ್ರಥಮ ವಿಮಾನದಲ್ಲೇ ಅವಕಾಶ ಲಭಿಸಿದ್ದು ಮೇ 12 ರಂದು ಮಂಗಳೂರಿಗೆ ತಲುಪಿದ್ದರು. ಹೊಟೇಲ್ ಕ್ವಾರಂಟೈನ್ನಲ್ಲಿದ್ದ ಅವರ ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಆ ಬಳಿಕ ಜಿಲ್ಲಾಡಳಿತದ ಪತ್ರದೊಂದಿಗೆ ಫ್ಲ್ಯಾಟ್ಗೆ ತೆರಳಿದ್ದು ಅಲ್ಲಿ ನಿರಾಕರಿಸಿದ್ದಾರೆ ಎಂದು ದೂರಲಾಗಿದೆ.
ಇನ್ನು ಎಲ್ಲಾ ವೈದ್ಯಕೀಯ ವ್ಯವಸ್ಥೆಯಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದರೂ ಕೂಡಾ ಕಾಯಬೇಕಾಗಿ ಬರುತ್ತಿತ್ತು. ಮೈ ಮುಟ್ಟಿ ಚಿಕಿತ್ಸೆ ನೀಡಲು ಮನಸ್ಸಿಲ್ಲದ ವೈದ್ಯರು ಬಿಪಿ ಚೆಕ್ಅಪ್ ಕಿಟ್ ಮರೆತಿರುವುದಾಗಿ ನೆಪ ಹೇಳುತ್ತಿದ್ದರು ಎಂದು ಗರ್ಭಿಣಿಯ ಸೋದರ ಮಾವ ಅಝೀಜ್ ಬಸ್ತಿಕರ್ ಮಾಧ್ಯಮವೊಂದಕ್ಕೆ ತಿಳಿಸಿರುವ ಬಗ್ಗೆ ವರದಿಯಾಗಿದೆ.
ಇನ್ನು ವರದಿ ನೆಗೆಟಿವ್ ಬಂದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದ ವೈದ್ಯರೂ 14 ದಿನ ಕ್ವಾರಂಟೈನ್ ಮುಗಿದ ಮೇಲೆಯೇ ಚಿಕಿತ್ಸೆ ಎಂದು ಹೇಳಿದ್ದಾರೆಂದು ಆಪಾದಿಸಿದ್ದು 2ನೇ ತಪಾಸಣೆ ನೆಗೆಟಿವ್ ಬಂದ ಕೂಡಲೇ ಆಸ್ಪತ್ರೆಗೆ ಬಂದಾಗ ಮಗು ಮೃತಪಟ್ಟಿದೆ. ತಾಯಿಯ ಜೀವ ಉಳಿಸಬೇಕಾದ್ದಲ್ಲಿ ಬಲವಂತದ ಹೆರಿಗೆ ಮಾಡಬೇಕು ಎಂದು ಹೇಳಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ತನಿಖೆ ಮಾಡುತ್ತೇನೆ : ಜಿಲ್ಲಾಧಿಕಾರಿ ಪ್ರತಿಕ್ರಿಯೆ
ಗರ್ಭಿಣಿಯ ಪ್ರಥಮ ಕೊರೊನಾ ತಪಾಸಣಾ ವರದಿ ನೆಗೆಟಿವ್ ಬಂದ ತಕ್ಷಣ ಅವರನ್ನು ಮನೆಗೆ ಕಳುಹಿಸಿದ್ದೇವೆ. ಮಹಿಳೆಗೆ ಅನ್ಯಾಯವಾಗಿದ್ದಲ್ಲಿ ದೂರು ಕೊಡಲಿ. ಆಕೆಯನ್ನು ಯಾಕೆ ಪ್ಲ್ಯಾಟ್ನಲ್ಲಿ ಸೇರಿಸಿಕೊಳ್ಳಲ್ಲಿಲ್ಲ ಹಾಗೂ ಹಾಗೂ ಯಾವ ವೈದ್ಯರು, ಆಸ್ಪತ್ರೆಯವರು ಚಿಕಿತ್ಸೆ ಕೊಟ್ಟಿಲ್ಲ ಎಂಬ ಬಗ್ಗೆ ತನಿಖೆಗೆ ಮಾಡಿ ತಿಳಿಸುತ್ತೇನೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದ್ದಾರೆ.
Comments are closed.