ಕರಾವಳಿ

ಬಾಳೆಕೋಡಿ ಮಠ ಸ್ವಾಮೀಜಿಯ ನಿಧನಕ್ಕೆ ವಿಶ್ವಹಿಂದು ಪರಿಷದ್ ತೀವ್ರ ಸಂತಾಪ

Pinterest LinkedIn Tumblr

ಮಂಗಳೂರು : ಪರಮ ಪೂಜ್ಯರಾದ ಕನ್ಯಾನ ಬಾಳೆಕೋಡಿ ಮಠ ಶ್ರೀ ಶ್ರೀ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಇಂದು ಇಹಕಾಯವನ್ನು ತೊರೆದಿದ್ದಾರೆ.

ಹಿಂದೂ ಸಮಾಜವನ್ನು ಒಡೆಯುವ ಶಕ್ತಿಗಳ ವಿರುದ್ಧ ಎದೆಕೊಟ್ಟು ನಿಂತು ಸಮಾಜದಲ್ಲಿ ಸಾಮರಸ್ಯವನ್ನು ತರುವ ಪ್ರಯತ್ನ ಮಾಡಿದವರು ಪೂಜ್ಯರು.ಪೂಜ್ಯ ಸಂತರ ಮೇಲೆ ಅಪಾರ ಶೃದ್ಧೆ ಗೌರವ ಹೊಂದಿರುವ ವಿಶ್ವಹಿಂದು ಪರಿಷದ್ ನಿರಂತರವಾಗಿ ಅವರ ಕೃಪಾಶೀರ್ವಾದ ಹಾಗು ಮಾರ್ಗದರ್ಶನದಲ್ಲಿ ಕಾರ್ಯ ಮಾಡುತ್ತಾ ಬಂದಿದೆ.

ಇವರ ಅಗಲುವಿಕೆ ನಮ್ಮಗೆಲ್ಲರಿಗೂ ಹಾಗೂ ಸಮಸ್ತ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ.ಪೂಜ್ಯರ ನಿಧನಕ್ಕೆ ವಿಶ್ವಹಿಂದು ಪರಿಷದ್ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ, ಹಾಗು ಅವರ ದಿವ್ಯಚೇತನಕ್ಕೆ ಶೃದ್ಧಾ ನಮನ ಸಮರ್ಪಿಸುತ್ತದೆ ಎಂದು ವಿಶ್ವಹಿಂದೂ ಪರಿಷದ್ ಪ್ರಾಂತ ಕಾರ್ಯಾಧ್ಯಕ್ಷರು ಪ್ರೊ! ಎಂ ಬಿ ಪುರಾಣಿಕ್ ಹಾಗು ವಿಭಾಗ ಕಾರ್ಯದರ್ಶಿ ಶ್ರೀ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

Comments are closed.