ಕರ್ನಾಟಕ

ರಾಜ್ಯದಿಂದ ಹೋಗಲು ನಿರ್ಧರಿಸಿದ 6 ಲಕ್ಷ ವಲಸೆ ಕಾರ್ಮಿಕರು

Pinterest LinkedIn Tumblr


ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಉದ್ಯೋಗ, ಕೆಲಸ, ದುಡಿಮೆಗಾಗಿ ಬಂದ ಉತ್ತರ ಮತ್ತು ಈಶಾನ್ಯ ಭಾರತದ ಸುಮಾರು 6 ಲಕ್ಷ ಜನರು ತಮ್ಮ ರಾಜ್ಯಗಳಿಗೆ ಮರಳಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಮತ್ತು ವಿವಿಧ ಅಂಗಡಿ ಮುಂಗಟ್ಟು, ಗಾರ್ಮೆಂಟ್ಸ್‌, ಪಾರ್ಲರ್‌, ಕೈಗಾರಿಕೋದ್ಯಮ ಪುನಾಧಿರಂಭಧಿವಾಗುತ್ತವೆ. ಕೆಲಸ ಕೊಡಲು ಸಿದ್ಧ ಎಂದು ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಕೈಗಾರಿಕೆಗಳ ಮಾಲೀಕರು ಮನವಿ ಮಾಡಿಕೊಂಡಿದ್ದರೂ ಕಾರ್ಮಿಕರು ವಾಪಸ್‌ ಹೋಗುವ ಧಾವಂತ ನಿಂತಿಲ್ಲ. ಇದು ರಾಜ್ಯದ ಕೈಗಾರಿಕೆ, ಉದ್ಯಮಿ, ನಿರ್ಮಾಣ ವಲಯಗಳ ಬೆಳವಣಿಗೆಯ ಮೇಲೆ ದೀರ್ಘಾವಧಿ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿರುವ 6 ಲಕ್ಷ ಕಾರ್ಮಿಕರು ತಮ್ಮ ಅರ್ಜಿ ಸಲ್ಲಿಸಿ ಒಪ್ಪಿಗೆ ಮತ್ತು ಪ್ರಯಾಣ ವ್ಯವಸ್ಥೆಗೆ ಕಾಯುತ್ತಿದ್ದಾರೆ. ಇದೇ ವೇಳೆ ರಾಜ್ಯದ ಎಲ್ಲ ಭಾಗಗಳಲ್ಲಿಕಾರ್ಮಿಕರು ನಡೆದುಕೊಂಡು ಅಥವಾ ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗದಂತೆ ಜಿಲ್ಲಾಡಳಿತ, ಪೊಲೀಸರು ಮನವಿ ಮಾಡುತ್ತಿದ್ದಾರೆ.

ಬೆಂಗಳೂರು, ಮಾಲೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ರೈಲು ನಿಲ್ದಾಣಗಳಿಂದ ಶ್ರಮಿಕ ವಿಶೇಷ ರೈಲುಗಳಲ್ಲಿ1.17 ಲಕ್ಷ ಜನರು ತಮ್ಮ ಊರುಗಳಿಗೆ ಹೋಗಿದ್ದಾರೆ. ಭಾನುವಾರ ಒಂದೇ ದಿನ 12 ರೈಲುಗಳು, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌, ರಾಜಸ್ಥಾನ ಮತ್ತು ಜಮ್ಮು ಕಾಶ್ಮೀರಕ್ಕೆ 10 ಸಾವಿರಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ದಿವೆ. ನೈರುತ್ಯ ರೈಲ್ವೆಯು ಒಟ್ಟು 85 ಶ್ರಮಿಕ ರೈಲುಗಳನ್ನು ವ್ಯವಸ್ಥೆ ಮಾಡಿವೆ ಎಂದು ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಮಾಹಿತಿ ನೀಡಿದರು.

ಊರಿಗೆ ಮರಳಲು ರೈಲು ಟಿಕೆಟ್‌ ಬುಕ್ಕಿಂಗ್‌ ಆಗುತ್ತಲೆ ಇವೆ. ಈ ಪೈಕಿ ಉತ್ತರ ಪ್ರದೇಶ, ಬಿಹಾರಕ್ಕೆ ಅರ್ಧದಷ್ಟು ರೈಲುಗಳು ಸಂಚರಿಸಿವೆ. ಉಳಿದಂತೆ ಜಾರ್ಖಂಡ್‌, ಒಡಿಶಾ ಮತ್ತು ಬಿಹಾರಕ್ಕೆ ತೆರಳಿವೆ. ಒಟ್ಟು ಆರು ಲಕ್ಷ ಜನರ ಪೈಕಿ ಬೆಂಗಳೂರಿನಿಂದಲೇ 3.1 ಲಕ್ಷ ಜನ ಹಾಗೂ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದ ಪ್ರದೇಶದಿಂದ 70 ಸಾವಿರ ಮಂದಿ ಊರಿಗೆ ಮರಳಲು ಹೆಸರು ನೋಂದಾಯಿಸಿದ್ದಾರೆ.

ಊರಿಗೆ ಹೋಗಲಿಚ್ಛಿಸುವ ಕಾರ್ಮಿಕರ ಹೆಸರು ನೋಂದಾಯಿಸಿಕೊಂಡು ವಾಪಸ್‌ ಕಳುಹಿಸಲು ಹಗಲಿರುಳು ಶ್ರಮಿಸಲಾಗುತ್ತಿದೆ. ಪೊಲೀಸರು, ರೈಲ್ವೆ ಇಲಾಖೆ, ರೈಲ್ವೆ ಭದ್ರತಾ ಪಡೆ ಮತ್ತು ರಾಜ್ಯ ರೈಲ್ವೆ ಪೊಲೀಸರು, ಬಿಬಿಎಂಪಿ, ಆರೋಗ್ಯ ಇಲಾಖೆ, ಬಿಎಂಟಿಸಿ ಸೇರಿದಂತೆ ಎಲ್ಲಇಲಾಖೆಗಳು ಹಗಲಿರುಳು ಶ್ರಮಿಸುತ್ತಿವೆ ಎಂದು ನೋಡಲ್‌ ಅಧಿಕಾರಿಯಾಗಿರುವ ಮಂಜುನಾಥ ಪ್ರಸಾದ್‌ ತಿಳಿಸಿದರು.

Comments are closed.