ಮಂಗಳೂರು : ಕಿನ್ನಿಗೋಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತಾಲಿಪ್ಯಾಡಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬೀಫ್ ಮಾಂಸಕ್ಕಾಗಿ ವಧಾಗೃಹಕ್ಕಾಗಿ ಲೈಸೆನ್ಸ್ ಕೊಟ್ಟದ್ದನ್ನು ರದ್ದುಪಡಿಸುವಂತೆ ಜಿಲ್ಲಾಡಳಿತ ಆದೇಶ ನೀಡಿದ್ದು ಈ ಕ್ರಮವನ್ನು ವಿಶ್ವಹಿಂದೂ ಪರಿಷದ್ – ಬಜರಂಗದಳ ಸ್ವಾಗತಿಸಿದ್ದು, ಪೊಲೀಸ್ ಇಲಾಖೆಯ ಈ ಕಾರ್ಯವನ್ನು ವಿಶ್ವಹಿಂದೂ ಪರಿಷದ್ ಶ್ಲ್ಯಾಘಿಸುತ್ತದೆ ಎಂದು ವಿಶ್ವಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದ್ದಾರೆ.
ಕಿನ್ನಿಗೋಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತಾಲಿಪ್ಯಾಡಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬೀಫ್ ಮಾಂಸಕ್ಕಾಗಿ ವಧಾಗೃಹಕ್ಕಾಗಿ ಲೈಸೆನ್ಸ್ ಕೊಟ್ಟದ್ದನ್ನು ರದ್ದುಪಡಿಸುವಂತೆ ಆದೇಶಿಸಲು ಕೋರಿ ಹಾಗೂ ಅಕ್ರಮ ಪರವಾನಿಗೆ ಕೊಟ್ಟ ಅಧಿಕಾರಿ ಹಾಗೂ ಸಹಕರಿಸದ ಅಧಿಕಾರಿಗಳನ್ನು ವಜಾ ಮಾಡಲು ಕೋರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು,
ಮುಲ್ಕಿ ವ್ಯಾಪ್ತಿಯ ಪುನರೂರು ಬಳಿ ಅಕ್ರಮವಾಗಿ ಗೋ ವುಗಳನ್ನು ವಧೆ ಮಾಡುತಿದ್ದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ 10 ಮೇ 2020 ರಂದು ಕೇಸು ದಾಖಲಾಗಿದ್ದು, ಇದೀಗ ಈ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಪರವಾನಿಗೆಯನ್ನು ರದ್ದುಮಾಡಲು ಜಿಲ್ಲಾಡಳಿತ ಆದೇಶ ನೀಡಿದ್ದು ಈ ಕ್ರಮವನ್ನು ವಿಶ್ವಹಿಂದೂ ಪರಿಷದ್ – ಬಜರಂಗದಳ ಸ್ವಾಗತಿಸಿದ್ದು, ಪೊಲೀಸ್ ಇಲಾಖೆಯ ಈ ಕಾರ್ಯವನ್ನು ವಿಶ್ವಹಿಂದೂ ಪರಿಷದ್ ಶ್ಲ್ಯಾಘಿಸುತ್ತದೆ ಎಂದು ವಿಶ್ವಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ

Comments are closed.