ಕರಾವಳಿ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ದೂರದರ್ಶನದಲ್ಲಿ ಪುನರ್ ಮನನ ಪಾಠ

Pinterest LinkedIn Tumblr

ಮಂಗಳೂರು ಏಪ್ರಿಲ್ 29 : 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ಮುಂದೂಡಲಾಗಿರುತ್ತದೆ.

ದೂರದರ್ಶನದಲ್ಲಿ ಕನ್ನಡ, ಇಂಗ್ಷಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಸಿದ್ಧಪಡಿಸಿ ರುವ ಪಾಠಗಳನ್ನು ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 4.30 ಗಂಟೆವರೆಗೆ ದೂರದರ್ಶನದಲ್ಲಿ ಪ್ರಸಾರ (ಚಂದನ ವಾಹಿನಿಯಲ್ಲಿ) ಮಾಡಲಾಗುತ್ತಿದೆ. ಇದೇ ಕಾರ್ಯಕ್ರಮದ ಮರು ಪ್ರಸಾರವನ್ನು ಮರುದಿನ ಬೆಳಿಗ್ಗೆ 6 ಗಂಂಟೆಯಿಂದ 7.30 ರವರೆಗೆ ಎಲ್ಲಾ ದಿನಗಳಂದು ನಡೆಸಲಾಗುವುದು.

ಬೇಸಿಗೆ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಲು ಅವರ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸಲು ಹಾಗೂ ಮನರಂಜನೆಗಾಗಿ ‘ಮಕ್ಕಳವಾಣಿ’ ಎಂಬ ಕಾರ್ಯಕ್ರಮ ಮಕ್ಕಳವಾಣಿ ಯೂಟ್ಯೂಬ್ ಚಾನಲ್‍ನಲ್ಲಿ ಈಗಾಗಲೇ ಪ್ರಸಾರವಾಗುತ್ತಿದೆ.

ಸದರಿ ಕಾರ್ಯಕ್ರಮವನ್ನು ಮತ್ತೊಮ್ಮೆ ದೂರದರ್ಶನದ (ಚಂದನ ವಾಹಿನಿಯಲ್ಲಿ) ಮೂಲಕ ಏಪ್ರಿಲ್ 29 ರಿಂದ ಮೇ. 28 ರವರೆಗೆ ಸಂಜೆ 5 ಗಂಟೆಯಿಂದ 5.30 ರವರೆಗೆ ಪ್ರಸಾರ ಮಾಡಲಾಗುವುದು.

ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಪರೀಕ್ಷಾ ಸಿದ್ಧತೆಯನ್ನು ಮಾಡಿಕೊಳ್ಳಲು ಹಾಗೂ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಲು ಅನುಕೂಲವಾಗುವುದು ಎಂದು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.