ಕರಾವಳಿ

ಅಪಘಾತದಲ್ಲಿ ರಾಮನಗರದ ಪಬ್ಲಿಕ್ ಟಿವಿ ‌ವರದಿಗಾರ ಹನುಮಂತು ಮೃತ್ಯು: ದ.ಕ.ಜಿಲ್ಲೆಯ ಪತ್ರಕರ್ತರಿಂದ ತೀವ್ರ ಸಂತಾಪ

Pinterest LinkedIn Tumblr

ಬೆಂಗಳೂರು / ಮಂಗಳೂರು, ಎಪ್ರಿಲ್.21: ಬೆಂಗಳೂರು ಹೊರವಲಯದ ರಾಮನಗರದ ಪಬ್ಲಿಕ್ ಟಿವಿ‌ ವರದಿಗಾರ ಹನುಮಂತು ಅವರು ಇಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬೆಂಗಳೂರು ಹೊರವಲಯದ ಪಾದರಾಯನಪುರದಲ್ಲಿ ಬಾನುವಾರ ನಡೆದ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ರಾಮನಗರದ ಕಾರಾಗೃಹದ ಬಳಿ ಹಿಂದಿನಿಂದ ಬಂದ ATM ವಾಹನ ಇವರ ವಾಹನಕ್ಕೆ ಡಿಕ್ಕಿ ಹೊಡೆದು ಹನುಮಂತು ಸಾವನ್ನಪ್ಪಿದ್ದಾರೆ.

ಹನುಮಂತು ಕಳೆದ 6 ವರ್ಷಗಳಿಂದಲೂ ರಾಮನಗರ ಪಬ್ಲಿಕ್ ಟಿವಿ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಮೂರು ವರ್ಷ ಹಿಂದೆ ವಿವಾಹವಾಗಿದ್ದು, ಪತ್ನಿ ಹಾಗೂ ಒಂದು ವರ್ಷದ ಪುತ್ರನನ್ನು ಆಗಲಿದ್ದಾರೆ.

ಪತ್ರಕರ್ತ ಹನುಮಂತು ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಕಂಬನಿ‌ ಮಿಡಿದಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು, ಛಾಯಚಿತ್ರ ವರದಿಗಾರರು, ವಾಹಿನಿಯ ಕ್ಯಾಮರಮ್ಯಾನ್ ಗಳು ಹನುಮಂತು ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

Comments are closed.