ಕರಾವಳಿ

ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲ್ಲಿದ್ದಾರೆ 34346 ವಿದ್ಯಾರ್ಥಿಗಳು : ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು  : ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ ತಿಂಗಳಿನಲ್ಲಿ ನಡೆಯಲಿದ್ದು ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ದ,ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಸಂಭಾಗಣದಲ್ಲಿ ನಡೆದ ದ್ಚಿತೀಯ ಪಿಯುಸಿ ಪರೀಕ್ಷೆ ಪೂರ್ವ ಸಿದ್ಧತೆ ಸಭೆ ಕುರಿತು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳು ಒಳಗೊಂಡಿದ್ದು, ಮಂಗಳೂರು 24 ಪರೀಕ್ಷೆ ಕೇಂದ್ರ, ಮೂಡಬಿದ್ರೆ 04 ಪರೀಕ್ಷೆ ಕೇಂದ್ರ, ಪುತ್ತೂರು ತಾಲೂಕು 07 ಪರೀಕ್ಷೆ ಕೇಂದ್ರ, ಪುತ್ತೂರು ತಾಲೂಕು 09 ಪರೀಕ್ಷೆ ಕೇಂದ್ರ, ಬೆಳ್ತಂಗಡಿ ತಾಲೂಕು 04 ಪರೀಕ್ಷೆ ಕೇಂದ್ರ, ಸುಳ್ಯ ತಾಲೂಕು 03 ಪರೀಕ್ಷೆ ಕೇಂದ್ರ ಹೊಂದಿದೆ. ಪರೀಕ್ಷೆಗೆ 17,137 ಬಾಲಕ ಮತ್ತು 17,209 ಬಾಲಕಿಯರು ಹಾಜರಾಗಲಿದ್ದಾರೆ.

ಪರೀಕ್ಷೆಗೆ ಒಟ್ಟು 34,346 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಕಲಾ ವಿಭಾಗದಲ್ಲಿ 4532 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 16,237 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 13,577 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಹಾಯಕ ಆಯುಕ್ತ ಮದನ್ ಮೋಹನ್, ಡಿ.ಡಿ.ಪಿ.ಯು. ವಿಷ್ಣು ಮೂರ್ತಿ, ಡಿ.ಪಿ.ಪಿ.ಐ ಮಲ್ಲೇಶಪ್ಪ, ಇಲಾಖೆಯ ಅಧಿಕಾರಿಗಳು, ಕಾಲೇಜು ಮುಖ್ಯಸ್ಥರು ಮತ್ತು ಮತ್ತಿತರು ಉಪಸ್ಥಿತರಿದ್ದರು.

Comments are closed.