ಕರಾವಳಿ

ತಂಬಾಕು ನಿಯಂತ್ರಣ ಕಾಯಿದೆ ಉಲ್ಲಂಘನೆ ವಿರುದ್ದ ಕಾರ್ಯಚರಣೆ :ಹಲವರಿಗೆ ಕಠಿಣ ಕ್ರಮದ ಎಚ್ಚರಿಕೆ

Pinterest LinkedIn Tumblr

ಮಂಗಳೂರು ಫೆಬ್ರವರಿ 19 : ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅನುಷ್ಠಾಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಓಟಿಪಿಎ-2003 ಕಾರ್ಯಚರಣೆ ನಡೆಸುವ ತಂಡವು ಅತ್ತಾವರ, ಕಂಕನಾಡಿ ಹಾಗೂ ಪಾಂಡೇಶ್ವರ ಪರಿಸರದಲ್ಲಿ ಸಿಓಟಿಪಿಎ 2003 ರ ಉಲ್ಲಂಘನೆಯ ವಿರುಧ್ಧ ಕಾರ್ಯಾಚರಣೆ ನಡೆಸಿ ಸೆಕ್ಷನ್ 4 ಹಾಗೂ 6ಬಿ ಪ್ರಕಾರ 24 ಕೇಸ್ ದಾಖಲಿಸಿ ರೂ.1800 ದಂಡ ವಿಧಿಸಲಾಯಿತು.

ಹಾಗೂ ಕಾಯಿದೆ ಕುರಿತಂತೆ ಅಂಗಡಿ ಹಾಗೂ ಹೋಟೇಲ್ ಮಾಲಿಕರಿಗೆ ಮಾಹಿತಿ ನೀಡಲಾಯಿತು. ಇನ್ನು ಮುಂದಿನ ದಿನಗಳಲ್ಲಿ ಇದರ ಉಲ್ಲಂಘನೆ ನಡೆದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಯಿತು. ಈ ತಂಡದಲ್ಲಿ ಸಮಾಜ ಕಾರ್ಯಕರ್ತೆ ಶ್ರುತಿ ಸಾಲ್ಯಾನ್, ಹಿರಿಯ ಆರೋಗ್ಯ ಸಹಾಯಕ ರುಧ್ರೇಶ್, ಪೊಲೀಸ್ ಸಿಬ್ಬಂದಿ ರವಿಕುಮಾರ್ ಹಾಗೂ ವಿದ್ಯಾ ಉಪಸ್ಥಿತರಿದ್ದರು.

Comments are closed.