ಕರಾವಳಿ

ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅವಭ್ರತ ( ಓಕುಳಿ ) ಮಹೋತ್ಸವ ; ವಿವಿಧ ಬಣ್ಣಗಳ ನೀರಿನೊಂದಿನಿಗೆ ಆಟವಾಡಿ ಸಂಭ್ರಮಿಸಿದ ಭಕ್ತಾಧಿಗಳು

Pinterest LinkedIn Tumblr

ಮಂಗಳೂರು : ನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳೂರು ರಥೋತ್ಸವ ಪ್ರಯುಕ್ತ ಆದಿತ್ಯವಾರ ಶ್ರೀ ದೇವರ ಅವಭ್ರತ ( ಓಕುಳಿ ) ಮಹೋತ್ಸವ ಸಮಾಜದ ಸಾವಿರಾರು ಅಬಾಲ ವೃದ್ಧ ಭಜಕರ ಹಾಗೂ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು.

ಪ್ರಾರಂಭದಲ್ಲಿ ಸರ್ವಾಭರಣ ಭೂಷಿತ ಶ್ರೀ ವೀರ ವೆಂಕಟೇಶ್ ಹಾಗೂ ಶ್ರೀನಿವಾಸ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿ ವಸಂತ ಮಂಟಪಕ್ಕೆ ತರಲಾಯಿತು ಬಳಿಕ ವಸಂತ ಮಂಟಪದಲ್ಲಿ ವಿಶೇಷ ಪೂಜೆ , ಅಷ್ಟಾವಧಾನ ಸೇವೆ , ನೆರೆದ ಸಮಾಜ ಬಾಂಧವರಿಂದ ಮಡೆಸ್ನಾನ ಸೇವೆ ನಂತರ ಶ್ರೀ ಗಳವರಿಂದ ಪ್ರವಚನ ನಡೆಯಿತು .

ಶ್ರೀ ದೇವರನ್ನು ಸ್ವರ್ಣ ಪಲ್ಲಕಿಯಲ್ಲಿರಿಸಿ ಐದು ಪೇಟೆ ಉತ್ಸವ ಭಾವುಕ ಭಗವತ್ ಭಕ್ತರ ಭುಜ ಸೇವೆ ಯೊಂದಿಗೆ ಜರಗಿತು
ಸಮಾಜದ ಪುರುಷರು ಮತ್ತು ಮಕ್ಕಳು ಅವಭ್ರತ ಮಹೋತ್ಸವದಲ್ಲಿ ಗುಲಾಬಿ ,ಅರಸಿನ ಬಣ್ಣದ ನೀರಿನೊಂದಿನಿಗೆ ಆಟವಾಡುತ್ತಿರುವ ದ್ರಶ್ಯ ರಥಬೀದಿಯಲ್ಲಿ ಕಂಡು ಬರುತಿತ್ತು .

ಶ್ರೀ ದೇವರ ಪೇಟೆ ಉತ್ಸವ ರಥಬೀದಿ , ನಂದ ದೀಪ , ಉಮಾ ಮಹೇಶ್ವರ ದೇವಸ್ಥಾನ ರಸ್ತೆ , ಕೆಳಗಿನ ರಥ ಬೀದಿ , ಡೋಂಗೇರಕೇರಿ , ಚಾಮರಗಲ್ಲಿ ಮೂಲಕ ವಿ ಟಿ ರಸ್ತೆಯ ಮೂಲಕ ಟ್ಯಾಂಕ್ ಕಾಲೋನಿ ಯಲ್ಲಿರುವ ಶ್ರೀ ಶ್ರೀನಿವಾಸ ನಿಗಮಗಮ ಪಾಠಶಾಲೆಯಲ್ಲಿರುವ ಪುಷ್ಕರಣಿಯಲ್ಲಿ ಶ್ರೀ ದೇವರ ಅವ್ಬ್ರತ ಸ್ನಾನ ನಡೆಯಿತು . ಶ್ರೀ ದೇವಳಕ್ಕೆ ಉತ್ಸವ ಮರಳಿದ ಬಳಿಕ ಧ್ವಜಾಅವರೋಹಣ ಬಳಿಕ ಮಹೋತ್ಸವ ಸಮಾಪನ ಗೊಂಡಿತು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.