ಕರಾವಳಿ

ಪ್ರತಿಷ್ಟಿತ ಹೆಮ್ಮಾಡಿ ಪಂಚಗಂಗಾ ಸೊಸೈಟಿ ಕಾಂಗ್ರೆಸ್ ತೆಕ್ಕೆಗೆ: 13 ಸ್ಥಾನದಲ್ಲೂ ಕೈ ಭರ್ಜರಿ ಜಯ!

Pinterest LinkedIn Tumblr

ಕುಂದಾಪುರ: ಪ್ರತಿಷ್ಟಿತ ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ(ರಿ.) ಇಲ್ಲಿನ ಚುನಾವಣೆಯು ಭಾನುವಾರ ನಡೆದಿದ್ದು 13 ಸ್ಥಾನಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆಲುವು ಸಾಧಿಸುವ ಮೂಲಕ ವಿಜಯ ಪತಾಕೆ ಹಾರಿಸಿದ್ದಾರೆ.

ಕಳೆದ ಅವಧಿಯಲ್ಲೂ ಕೂಡ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮೇಲುಗೈ ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಈ ಬಾರಿ ಸೊಸೈಟಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶತಾಯಗತಾಯ ಪೈಪೋಟಿ ನೀಡಿತ್ತು. ಆದರೂ ಕೂಡ ಈ ಹಿಂದಿನ ಅಧಿಕಾರಾವಧಿಯಲ್ಲಿ ಸದಸ್ಯರು ಜನರಿಗೆ ನೀಡಿದ ಸೇವೆ ಈ ಬಾರಿ ಮತವಾಗಿ ಪರಿವರ್ತನೆಗೊಂಡಿದ್ದು ಕೈ ಗೆಲುವಿನ ನಗೆ ಬೀರಲು ಕಾರಣವಾಗಿದೆ ಎನ್ನಲಾಗುತ್ತಿದೆ‌.

ಗೆಲುವಿನ ಸರದಾರರು!
ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಚಂದ್ರ ನಾಯ್ಕ್-715 ಮತ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ- 701 ಮತ, ಆನಂದ್ ಪಿ.ಎಚ್- 676 ಮತ, ಅಂತೋನಿ ಲೂಯಿಸ್- 671 ಮತ, ಚಂದ್ರ ಪೂಜಾರಿ-637 ಮತ, ಸಂತೋಷ ಕುಮಾರ್ ಶೆಟ್ಟಿ ತೋಟಬೈಲು- 604 ಮತ, ಚಂದ್ರಶೇಖರ ಪೂಜಾರಿ- 603 ಮತ, ಹಿಂದುಳಿದ ವರ್ಗದಿಂದ ಸ್ಪರ್ದಿಸಿದ ಎಚ್. ರಾಜೀವ ದೇವಾಡಿಗ-805 ಮತ, ಹಕ್ಲಾಡಿ ಸಂತೋಷ ಕುಮಾರ್ ಶೆಟ್ಟಿ- 824 ಮತ, ಮಹಿಳಾ ಮೀಸಲಾತಿಯಿಂದ ಸ್ಪರ್ಧಿಸಿದ ಚಂದ್ರಮತಿ ಹೆಗ್ಡೆ-675ಮತ, ಸಾಧು ಎಸ್ ಬಿಲ್ಲವ-611 ಮತ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸ್ಪರ್ಧಿಸಿದ ಅನಂತ ಮೋವಾಡಿ-837 ಮತ, ಪರಿಶಿಷ್ಟ ಪಂಗಡ ಸ್ಥಾನದಿಂದ ಸ್ಪರ್ಧಿಸಿದ ಶಾರದಾ- 799 ಮತ ಪಡೆದಿದ್ದಾರೆ.

ಕಾಂಗ್ರೆಸ್ ಬೆಂಬಲಿಗರ ವಿಜಯೋತ್ಸವ…
ಗೆಲುವಿನ ಸುದ್ದಿಯನ್ನು ಚುನಾವಣಾಧಿಕಾರಿಗಳು ಪ್ರಕಟಿಸುತ್ತಲೇ ಕೈ ಬೆಂಬಲಿಗರ ಹರ್ಷ ಮುಗಿಲುಮುಟ್ಟಿತ್ತು. ಹೆಮ್ಮಾಡಿ ಪೇಟೆಯವರೆಗೆ ಮೆರವಣಿಗೆ ಮೂಲಕ ಸಾಗಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಾಜಿ ಶಾಸಕ‌ ಕೆ. ಗೋಪಾಲ ಪೂಜಾರಿ ಪರ ಘೋಷಣೆ ಕೂಗಿ ಗೆಲುವಿನ ಉತ್ಸಾಹ ಪ್ರದರ್ಶಿಸಿದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ತಾ.ಪಂ ಸದಸ್ಯರಾದ ವಾಸುದೇವ ಪೈ, ಉದಯ ಜಿ. ಪೂಜಾರಿ, ತಲ್ಲೂರು ಗ್ರಾ.ಪಂ ಅಧ್ಯಕ್ಷ ಆನಂದ ಬಿಲ್ಲವ, ಮುಖಂಡರಾದ ರಾಜು ಪೂಜಾರಿ ಕಾಳೂರಮನೆ, ಜೋಗ ಪೂಜಾರಿ, ರಾಜು ಪೂಜಾರಿ ಗುಜ್ಜಾಡಿ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.