ಕರಾವಳಿ

ಮಿ. ಟೀನ್ ಇಂಡಿಯಾ -2019 : ಪ್ರಶಸ್ತಿ ಗೆದ್ದ ಮಂಗಳೂರು ಮೂಲದ ಸಾಹಿಲ್ ಶೆಟ್ಟಿ

Pinterest LinkedIn Tumblr

ಮಂಗಳೂರು : ಮಂಗಳೂರು ಮೂಲದ ಸಾಹಿಲ್ ಶೆಟ್ಟಿ ಅವರು ಹೊಸದಿಲ್ಲಿಯ ಪಾಲ್ಮ್ ಗ್ರೀನ್ ಹೋಟೆಲ್ ಆಂಡ್ ರೆಸಾರ್ಟ್‌ನಲ್ಲಿ ಜರಗಿದ ಮಿ. ಟೀನ್ ಇಂಡಿಯಾ -2019 ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಕರಾವಳಿಯವರು ಮತ್ತು ಕತಾರ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲಿ ಹೆಮ್ಮೆ ಮೂಡಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ 105 ಮಂದಿಯನ್ನು ಹಿಂದಿಕ್ಕಿ ಇವರು ಪ್ರಶಸ್ತಿ ಗೆದ್ದಿದ್ದು, ಆ ಮೂಲಕ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ತೊಡಿಸಿಕೊಂಡಿದ್ದಾರೆ. ಜತೆಗೆ ಇತ್ತೀಚೆಗೆ ಪೂನಾದಲ್ಲಿ ಜರಗಿದ್ದ ಟಾಪ್ ಮಾಡೆಲ್ ಸ್ಪರ್ಧೆಯನ್ನೂ ಅವರು ಗೆದ್ದಿದ್ದಾರೆ. ಇವರು ದೀರ್ಘಕಾಲದಿಂದ ಕತಾರ್‌ನಲ್ಲಿ ನೆಲೆಸಿರುವ ಅತ್ರಬೈಲ್ ಸುಧಾಕರ ಶೆಟ್ಟಿ ಮತ್ತು ಪ್ರಾರ್ಥನಾ ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ. ಸುಧಾಕರ ಶೆಟ್ಟಿ ಅವರು ಕತಾರ್‌ನ ತುಳುಕೂಟ ಮತ್ತು ಬಂಟರ ಸಂಘದ ಸ್ಥಾಪಕ ಸದಸ್ಯರೂ ಆಗಿದ್ದಾರೆ.

Comments are closed.