ಕರಾವಳಿ

ಹುಟ್ಟೂರ ಸನ್ಮಾನಕ್ಕೆಂದು ಕೋಟೇಶ್ವರಕ್ಕೆ ಬರುತ್ತಿದ್ದ ಸಾಹಿತಿ ಅಪಘಾತದಲ್ಲಿ ಮೃತ

Pinterest LinkedIn Tumblr

ಕುಂದಾಪುರ: ಕೋಟೇಶ್ವರ ಹುಟ್ಟೂರು ಸಮಾಜ ರತ್ನ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಂದ ಕುಂದಾಪುರಕ್ಕೆ ಬರುತ್ತಿದ್ದ ಹಿರಿಯ ಸಾಹಿತಿ, ಉದ್ಯಮಿ ಎಟೂ ಝಡ್ ಎಂದೇ ಗುರುತಿಸಿಕೊಂಡ ಕೋಟೇಶ್ವರ ಸೂರ್ಯನಾರಾಯಣ ರಾವ್ (೭೫) ಗುಂಡ್ಮಿ ಸಮೀಪ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೂಲತ: ಕೋಟೇಶ್ವರದವರಾದ ಬೆಂಗಳೂರಲ್ಲಿ ಉದ್ಯಮ ನಡೆಸುತ್ತಿದ್ದ ಸೂರ್ಯನಾರಾಯಣ ರಾವ್ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿದ್ದು, ಸಾಹಿತಿಯಾಗಿ ಗುರುತಿಸಿಕೊಂಡಿದ್ದರು. ಇವರ ಸಾಹಿತ್ಯ ಸೇವೆ ಗುರುತಿಸಿ ಡಿವಿಜಿ ಪ್ರಶಸ್ತಿಯಲ್ಲದೆ ಹಲವಾರು ಪ್ರಶಸ್ತಿ ನೀಡಿ ಗೌರವಿಸಲಾಗುತ್ತು.ಕೋಟೇಶ್ವರ ಮೈತ್ರೀಯ ಟಸ್ಟ್‌ನಲ್ಲಿ ತೊಡಗಿಸಿಕೊಂಡಿದ್ದು, ಕೊಡುಗೈ ದಾನಯಾಗಿದ್ದು, ಸಮಾಜಕ್ಕೆ ನೀಡಿದ ಕೊಡಗೆ ಹಿನ್ನೆಲೆಯಲ್ಲಿ ಕೋಟೇಶ್ವರ ಕೊಡಿ ಹಬ್ಬದ ದಿನ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಸಲು ನಿರ್ಧರಿಸಲಾಗುತ್ತು. ಹುಟ್ಟೂರು ಸನ್ಮಾನದ ದಿನವೇ ಸೂರ್ಯನಾರಾಯಣ ಅಡಿಗ ಮೃತಪಟ್ಟಿದ್ದು, ಪತ್ನಿ, ಇಬ್ಬರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳ ಅಗಲಿದ್ದಾರೆ.

Comments are closed.